Advertisement

ಉಪ್ಪಳ: ದಫನಗೈದ ಮೃತದೇಹ ಮೇಲಕ್ಕೆತ್ತಿ ಸಂಬಂಧಿಕರಿಗೆ ಹಸ್ತಾಂತರ

12:36 AM Oct 16, 2022 | Team Udayavani |

ಉಪ್ಪಳ: ಐಲ ಶಿವಾಜಿ ನಗರದಲ್ಲಿ ದಫನಗೈದ ತೊಕ್ಕೊಟ್ಟು ನಿವಾಸಿ ಜಾಕಿರ್‌ ಯಾನೆ ಜಾಕಿ (36) ಅವರ ಮೃತದೇಹವನ್ನು ಮೇಲಕ್ಕೆತ್ತಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.

Advertisement

ಸೆ. 30ರಂದು ಕುಂಬಳೆ ಸಮುದ್ರ ಕಿನಾರೆಯಲ್ಲಿ ಜೀರ್ಣಗೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಮೃತ ದೇಹದ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ಹಲವು ದಿನಗಳ ತನಕ ಇರಿಸಲಾಗಿತ್ತು. ಆದರೂ ಸಂಬಂಧಿಕರು ತಲುಪದ ಹಿನ್ನೆಲೆಯಲ್ಲಿ ಸೇವಾ ಭಾರತಿ ನೇತೃತ್ವದಲ್ಲಿ ಐಲ ಶಿವಾಜಿನಗರದ ಹಿಂದೂ ರುದ್ರ ಭೂಮಿಯಲ್ಲಿ ದಫನ ಮಾಡಲಾಗಿತ್ತು.

ಅನಂತರ ಮೃತಪಟ್ಟ ವ್ಯಕ್ತಿಯ ಸಂಬಂಧಿಕರು ಕುಂಬಳೆಗೆ ಬಂದು ಮೃತದೇಹದಲ್ಲಿದ್ದ ಉಡುಪುಗಳು ಹಾಗೂ ಜೇಬಿನಲ್ಲಿದ್ದ ಕೀಲಿ ಗೊಂಚಲು ಪರಿಶೀಲಿಸಿದಾಗ ಮೃತ ವ್ಯಕ್ತಿ ಜಾಕಿರ್‌ ಎಂದು ಗುರುತಿಸಲಾಗಿತ್ತು. ಇದರಿಂದ ಸಹೋದರನ ಡಿಎನ್‌ಎ ಪರೀಕ್ಷೆ ನಡೆಸಲಾಗಿತ್ತು. ಮೃತದೇಹದ ಡಿಎನ್‌ಎ ಈ ಮೊದಲೇ ನಡೆಸಲಾಗಿತ್ತು.

ಡಿಎನ್‌ಎ ಪರೀಕ್ಷಾ ವರದಿ ಲಭಿಸಿದ್ದು ಹೊಂದಾಣಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ರವೀಂದ್ರನ್‌, ಶಿರಿಯ ಕರಾವಳಿ ಠಾಣೆ ಸಿ.ಐ. ದಿಲೀಶ್‌, ಅವರ ಉಪಸ್ಥಿತಿಯಲ್ಲಿ ಮೃತದೇಹವನ್ನು ಮೇಲಕ್ಕೆತ್ತಿ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next