Advertisement

ಶಿಶಿಲ ಸಮೀಪ ಜುಗಾರಿ ಅಡ್ಡೆಗೆ ದಾಳಿ: 1 ಲಕ್ಷಕ್ಕೂ ಅಧಿಕ ಮೊತ್ತದ ಸೊತ್ತು, 9 ಮಂದಿ ವಶಕ್ಕೆ

12:46 AM Oct 19, 2022 | Team Udayavani |

ಬೆಳ್ತಂಗಡಿ: ಶಿಶಿಲ ಗ್ರಾಮದ ಅಂಚಿನಡ್ಕದ ಸರಕಾರಿ ಗುಡ್ಡ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಹಣವನ್ನು ಪಣವಾಗಿಟ್ಟು, ಇಸ್ಪೀಟ್‌ ಜುಗಾರಿ, ಆಟ ಆಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ 9 ಮಂದಿ ಜಾಗೂ ಸ್ಥಳದಲ್ಲಿದ್ದ ನಗದು ಸಹಿತ 1,01,370 ರೂ.ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

Advertisement

ಜುಗಾರಿಯಲ್ಲಿ ನಿರತರಾಗಿದ್ದ ಶಿಶಿಲ ಗ್ರಾಮದ ಓಟ್ಲ ನಿವಾಸಿ ವೆಂಕಪ್ಪ (55), ಪರಾರಿ ಬಾಳ ಹಿತ್ತಿಲು ವಸಂತ ಗೌಡ (48), ನಾಗನಡ್ಕ ಮನೆ ಕೃಷ್ಣಪ್ಪ ಗೌಡ (45), ಐಂಗುಡ ಮನೆ ಶಿವರಾಮ ಗೌಡ (53), ಅಂಬೆತ್ತಡ್ಕ ಸದಾಶಿವ (38), ಮುಳಿಮಜಲು ಪೊಡಿಯಾ (50), ಅಂಬೆತ್ತಡ್ಕ ಹೊನ್ನಪ್ಪ ಗೌಡ (47), ಮಚ್ಚಿರಡ್ಕ ಸುರೇಶ (33), ಮುಳಿಮಜಲು ಕೇಶವ (42) ಅವರನ್ನು ವಶಕ್ಕೆ ಪಡೆಯಲಾಗಿದೆ.

ಪಣವಾಗಿಟ್ಟ ನಗದು 11,370 ರೂ. ಹಾಗೂ ದ್ವಿಚಕ್ರ ವಾಹನ, ಮಾರುತಿ ಆಮ್ನಿ ನಗದು ಹಾಗೂ ಸೊತ್ತುಗಳು ಸೇರಿ ಅಂದಾಜು 1,01,370 ರೂ. ಸೊತ್ತು ವಶಕ್ಕೆ ಪಡೆಯಲಾಗಿದೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next