Advertisement

ತೊಕ್ಕೊಟ್ಟು: ಯುವಕನಿಗೆ ಚೂರಿ ಇರಿತ

12:31 AM Dec 22, 2019 | mahesh |

ಉಳ್ಳಾಲ: ತೊಕ್ಕೊಟ್ಟಿನ ಕಾಪಿಕಾಡ್‌ ಸಮೀಪದ ಅಂಬಿಕಾ ರಸ್ತೆ ನಿವಾಸಿ ನಿತಿನ್‌ ಕೋಟ್ಯಾನ್‌ (30) ಎಂಬವರಿಗೆ ಬೈಕಿನಲ್ಲಿ ಬಂದ ಅಪರಿಚಿತರು ಚೂರಿಯಿಂದ ಇರಿದು ಪರಾರಿಯಾದ ಘಟನೆ ಶನಿವಾರ ರಾತ್ರಿ ಸಂಭವಿಸಿದೆ.

Advertisement

ತೊಕ್ಕೊಟ್ಟಿನಲ್ಲಿರುವ ಬೇಕರಿಗೆ ಬಂದು ತನ್ನ ಸ್ಕೂಟಿಯಲ್ಲಿ ಮನೆಗೆ ಮರುಳುತ್ತಿದ್ದಾಗ ಹಿಂದಿನಿಂದ ಬೈಕಿನಲ್ಲಿ ಬರುತ್ತಿದ್ದವರು ರಾಂಗ್‌ ಸೈಡ್‌ನಲ್ಲಿ ಮುಂದೆ ಸಾಗಲು ಯತ್ನಿಸಿದರು. ಆಗ ನಿತಿನ್‌ ದಾರಿ ಬಿಟ್ಟಿಲ್ಲ ಎಂಬ ಕಾರಣಕ್ಕಾಗಿ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

ಗಾಯಗೊಂಡಿದ್ದ ನಿತಿನ್‌ ಮನೆಗೆ ಓಡಿ ಬಂದರು. ವಿಷಯ ತಿಳಿದ ಮನೆಯವರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆತಂದಿದ್ದು, ಸದ್ಯ ಅವರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next