Advertisement

ಕರಾವಳಿ ಭಾಗದ ಇಂದಿನ ಅಪರಾಧ ಸುದ್ದಿಗಳು

07:12 PM Jul 22, 2019 | Team Udayavani |

ಒಳಮೊಗ್ರು: ಕೆರೆಗೆ ಬಿದ್ದು ಸಾವು
ಪುತ್ತೂರು: ಒಳಮೊಗ್ರು ಗ್ರಾಮದ ಮೊಡಪ್ಪಾಡಿಯಲ್ಲಿ ತೋಟಕ್ಕೆ ತೆರಳಿದ್ದ ಮಹಿಳೆಯೊಬ್ಬರು ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.

Advertisement

ಮಂಜುನಾಥ ರೈ ಅವರ ಪತ್ನಿ ಹೇಮಲತಾ (47) ಅವರು ಮನೆ ಸಮೀಪದ ತೋಟದಲ್ಲಿ ತೆಂಗಿನಕಾಯಿ ತೆಗೆಯುತ್ತಿದ್ದಾಗ ಕಾಲು ಜಾರಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಮಂಜುನಾಥ ರೈ ನೀಡಿದ ದೂರಿನಂತೆ ಪುತ್ತೂರು ಗ್ರಾಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆರ್ಗಾಲು : ತೋಡಿಗೆ ಬಿದ್ದು ಸಾವು
ಉಪ್ಪುಂದ: ಕೆರ್ಗಾಲು ಗ್ರಾಮ ಪಂಚಾಯತ್ ನಂದನವನದ ಬಸವನಬೆಟ್ಟು ನಿವಾಸಿ ಸುಬ್ಬ ಯಾನೆ ಸುಭಾಷ್ (50) ಅವರು ಕಾಲು ಜಾರಿ ತೋಡಿಗೆ ಬಿದ್ದು  ಮೃತಪಟ್ಟಿದ್ದಾರೆ. ಅವರು ಜು.19ರಂದು ಸಂಜೆ ಮನೆಯಿಂದ ಪೇಟೆಗೆಂದು ಹೋದವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ದೂರು ದಾಖಲಾಗಿತ್ತು.

ಮನೆಯವರು ಹುಡುಕಾಡಿದಾಗ ಜು. 21ರಂದು ಸಂಜೆ ನಂದನವನ ಅಣ್ಣಪ್ಪ ಶೆಟ್ಟಿ ಅವರ ಮನೆಯ ಸಮೀಪದ ತೋಡಿನಲ್ಲಿ ಮೃತದೇಹ ಕಂಡುಬಂದಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next