Advertisement

ಮಣಿಪಾಲ: ವಿದ್ಯುತ್‌ ಕಂಬಕ್ಕೆ ಢಿಕ್ಕಿಯಾಗಿ ನಜ್ಜುಗುಜ್ಜಾದ ಕಾರು

01:10 AM Oct 18, 2022 | Team Udayavani |

ಮಣಿಪಾಲ: ಮರವಂತೆ ಕಡೆಯಿಂದ ಮಣಿಪಾಲ ಕಡೆಗೆ ಬರುತ್ತಿದ್ದ ಕಾರೊಂದು ಪೆರಂಪಳ್ಳಿ ಸುಂದರಿ ಗೇಟ್‌ ಸಮೀಪ ವಿದ್ಯುತ್‌ ಕಂಬಕ್ಕೆ ಢಿಕ್ಕಿಯಾಗಿ ಪಲ್ಲಿಯಾದ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ.

Advertisement

ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದು, ಪರಿಸರದಾದ್ಯಂತ ರಾತ್ರಿಪೂರ್ತಿ ವಿದ್ಯುತ್‌ ಇರಲಿಲ್ಲ.

ಚಾಲಕನ ನಿಯಂತ್ರಣ ತಪ್ಪಿದ ಕಾರು ವಿದ್ಯುತ್‌ ಕಂಬಕ್ಕೆ ಢಿಕ್ಕಿಯಾಗಿ 2-3 ಪಲ್ಟಿಯಾಗಿ, ಮತ್ತೊಂದು ಕಂಬಕ್ಕೆ ಢಿಕ್ಕಿಯಾಗಿ ನಿಂತಿತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಾರಿನಲ್ಲಿ ಇತರ 2-3 ಮಂದಿ ಇದ್ದರೆನ್ನಲಾಗಿದೆ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಕಾರು ಮಾತ್ರ ನಜ್ಜುಗುಜ್ಜಾಗಿದೆ ಎಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ.

ಅಪಘಾತ ವಲಯ
ಅಪಘಾತ ಸಂಭವಿಸಿದ ಪ್ರದೇಶ ತಿರುವಿನಿಂದ ಕೂಡಿದ್ದು, ಅಪಾಯಕಾರಿಯಾಗಿದೆ. ವಾರಕ್ಕೆ ಒಂದೆರಡು ಅಪಘಾತಗಳು ಇಲ್ಲಿ ಸರ್ವೇ ಸಾಮಾನ್ಯ. ಈ ತಿರುವನ್ನು ಸರಿ ಮಾಡಬೇಕೆಂದು ಆಗ್ರಹಿಸಿದರೂ ಇದುವರೆಗೆ ಸರಿ ಮಾಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Advertisement

ವಿದ್ಯುತ್‌ ಕಡಿತ
ವಿದ್ಯುತ್‌ ಕಂಬ ತುಂಡಾದ ಕೂಡಲೇ ವಿದ್ಯುತ್‌ ಕಡಿತವಾಗಿದ್ದು, ಅನಂತರ ಇಲ್ಲಿನ ಪುತ್ತೂರು ಫೀಡರ್‌ನಿಂದ ವಿದ್ಯುತ್‌ ಸರಬರಾಜು ಸ್ಥಗಿತಗೊಳಿಸಲಾಯಿತು. ಅಂಬಾಗಿಲು, ಹನುಮಂತನಗರ, ರಾಜೀವ ನಗರ, ಪೆರಂಪಳ್ಳಿ ಸುತ್ತಮುತ್ತ ವಿದ್ಯುತ್‌ ಸರಬರಾಜು ಸ್ಥಗಿತಗೊಂಡಿದೆ.

ಕಂಬ ಬದಲಿಸಬೇಕಿರುವುದರಿಂದ ವಿದ್ಯುತ್‌ ಸರಬರಾಜು ಪುನರಾರಂಭ ಬೆಳಗ್ಗೆಯಷ್ಟೇ ಸಾಧ್ಯವಾಗಬಹುದು ಎಂದು ಮೆಸ್ಕಾಂ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next