Advertisement

ಪುತ್ತೂರು; ರಸ್ತೆ ಅಪಘಾತ: ಗಾಯಾಳು ಯುವಕ ಸಾವು

05:27 PM May 07, 2022 | Team Udayavani |

ಪುತ್ತೂರು : ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ನಗರದ ಬೈಪಾಸ್‌ನಲ್ಲಿ ಮೇ 4 ರಂದು ಸ್ಕೂಟರ್‌ ಮತ್ತು ಟಿಪ್ಪರ್‌ ನಡುವಿನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಹಸವಾರ ಆರ್ಯಾಪು ಗ್ರಾಮದ ನೀರ್ಕಜೆ ಹಸೈನಾರ್‌ ಅವರ ಪುತ್ರ ಮಹಮ್ಮದ್‌ ಆಸೀರ್‌(17) ಚಿಕಿತ್ಸೆ ಫಲಕಾರಿಯಾಗದೆ ಮೇ 7 ರಂದು ಮೃತಪಟ್ಟಿದ್ದಾರೆ.

Advertisement

ಬೈಕ್‌ ಒಂದನ್ನು ಓವರ್‌ಟೇಕ್‌ ಮಾಡಿ ಸ್ಕೂಟರ್‌ ಸವಾರ ವೇಗವಾಗಿ ಮುಂದೆ ಹೋಗುತ್ತಿದ್ದಾಗ ಎದುರಿನಿಂದ ವೇಗವಾಗಿ ಬರುತಿದ್ದ ಟಿಪ್ಪರ್‌ ಡಿಕ್ಕಿಯಾಗಿದ್ದು, ಅರಿಯಡ್ಕ ಗ್ರಾಮದ ಜಾರತ್ತಾರ್‌ ನಿವಾಸಿ ಆದಂ ಅವರ ಪುತ್ರ, ಬೈಕ್‌ ಸವಾರ ಸಿನಾನ್‌ (18) ಸ್ಥಳದಲ್ಲೇ ಮೃತಪಟ್ಟಿದ್ದರು.

ಇದನ್ನೂ ಓದಿ:ಗೋವುಗಳನ್ನು ದತ್ತು ತೆಗೆದುಕೊಳ್ಳುವ ಪುಣ್ಯಕೋಟಿ ಯೋಜನೆ ಪ್ರಾರಂಭ : ಸಿಎಂ

ಹಿಂಬದಿ ಸವಾರ ಮಹಮ್ಮದ್‌ ಆಸೀರ್‌ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next