Advertisement

Kundapura ಭಾಗದ ಅಪರಾಧ ಸುದ್ದಿಗಳು: ಬಾತ್‌ರೂಮ್‌ನಲ್ಲಿ ಬಿದ್ದು ವ್ಯಕ್ತಿ ಸಾವು

12:11 AM Sep 05, 2023 | Team Udayavani |

ಕುಂದಾಪುರ: ಕರ್ಕುಂಜೆ ಗ್ರಾಮದ ನೇರಳಕಟ್ಟೆ ನಿವಾಸಿ ವೆಂಕಟೇಶ ಗಾಣಿಗ (65) ಅವರು ಸೆ. 3ರಂದು ಸಂಜೆ ಬಾತ್‌ರೂಮ್‌ನಲ್ಲಿ ಸ್ನಾನ ಮಾಡುವ ವೇಳೆ ಬಿದ್ದು, ಅಸ್ವಸ್ಥಗೊಂಡು ಸಾವನ್ನಪ್ಪಿದ ಘಟನೆ ಸಂಭವಿಸಿದೆ.

Advertisement

ಗಾಯಗೊಂಡ ಅವರನ್ನು ಕೂಡಲೇ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಅವರು ಅದಾಗಲೇ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲಗಿದ್ದಲ್ಲಿಯೇ ವ್ಯಕ್ತಿ ಸಾವು
ಕುಂದಾಪುರ: ವಿಪರೀತ ಕುಡಿತದ ಚಟ ಹೊಂದಿದ್ದ ನಾಗರಾಜ (39) ಅವರು ತಲ್ಲೂರಿನ ಸೊಸೈಟಿಯೊಂದರ ಬಳಿ ಮಲಗಿದ್ದಲ್ಲಿಯೇ ಸಾವನ್ನಪ್ಪಿದ ಘಟನೆ ಸೆ. 4ರಂದು ಬೆಳಗ್ಗೆ 7 ಗಂಟೆಯ ಸುಮಾರಿಗೆ ಬೆಳಕಿಗೆ ಬಂದಿದೆ.
ಅವರು ಕುಂದಾಪುರ, ತಲ್ಲೂರು ಮತ್ತಿತರರ ಕಡೆಗಳಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಅಲ್ಲಿಯೇ ಎಲ್ಲಿಯಾದರೂ ಅಂಗಡಿ ಬದಿ ಮಲಗುತ್ತಿದ್ದರು. ವಿಪರೀತವಾಗಿ ಕುಡಿಯುತ್ತಿದ್ದರು. ಸಹೋದರ ಲಕ್ಷ್ಮಣ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೀನು ಹಿಡಿಯುವಾಗ ಬಿದ್ದು ಸಾವು
ಕುಂದಾಪುರ: ಕರ್ಕುಂಜೆ ಗ್ರಾಮದ ಹೆರ್ಜಾಡಿ ಎಂಬಲ್ಲಿರುವ ಚಕ್ರಾ ನದಿಗೆ ಗಾಳ ಹಾಕಿ ಮೀನು ಹಿಡಿಯುತ್ತಿದ್ದ ಗೋಪಾಲ (62) ಅವರು ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸೆ. 4ರ ಬೆಳಗ್ಗೆ 5 ಗಂಟೆ ಸುಮಾರಿಗೆ ಸಂಭವಿಸಿದೆ. ಪುತ್ರಿ ಆಶಾ ಅವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಸ್ಪೀಟು ಜುಗಾರಿ: ನಾಲ್ವರ ವಶ
ಗಂಗೊಳ್ಳಿ: ಹಕ್ಲಾಡಿ ಗ್ರಾಮದ ಹಕ್ಕಾಡಿಯ ಸರಕಾರಿ ಗೇರು ಹಾಡಿಯಲ್ಲಿ ಇಸ್ಪೀಟು ಜುಗಾರಿ ಆಡುತ್ತಿದ್ದ ಅಶ್ರಫ್‌, ಸುರೇಶ್‌, ಗಣಪಯ್ಯ ಶೆಟ್ಟಿ ಹಾಗೂ ದಿನಕರ ಶೆಟ್ಟಿಯನ್ನು ಗಂಗೊಳ್ಳಿ ತನಿಖಾ ಎಸ್‌ಐ ಬಸವರಾಜ್‌ ನೇತೃತ್ವದ ಗಂಗೊಳ್ಳಿ ಪೊಲೀಸರ ತಂಡ ವಶಕ್ಕೆ ಪಡೆದಿದೆ. ಈ ವೇಳೆ ಆಟಕ್ಕೆ ಬಳಸಿದ ಪರಿಕರಗಳು, ಸ್ಥಳದಲ್ಲಿ ಸಿಕ್ಕ 6,100 ರೂ. ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next