Advertisement

Crime news ; ಕುಂದಾಪುರ ಭಾಗದ ಅಪರಾಧ ಸುದ್ದಿಗಳು

10:52 PM Feb 27, 2024 | Team Udayavani |

ಸ್ಕೂಟರ್‌ಢಿಕ್ಕಿ : ಪಾದಚಾರಿಗೆ ಗಾಯ
ಕುಂದಾಪುರ: ಕುಂಭಾಶಿ ಗ್ರಾಮದ ಕರಾವಳಿ ಮೀನುಗಾರಿಕೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಶೇಷಗಿರಿ ಆಚಾರ್‌(62) ಅವರಿಗೆ ರಾಜೇಶ್‌ ಎಂಬುವರು ಚಲಾಯಿಸುತ್ತಿದ್ದ ಸ್ಕೂಟರ್‌ಢಿಕ್ಕಿಯಾಗಿ ಗಾಯಗೊಂಡ ಘಟನೆ ಫೆ. 27 ರಂದು ಸಂಭವಿಸಿದೆ.

Advertisement

ಗಾಯಗೊಂಡ ಶೇಷಗಿರಿ ಅವರನ್ನು ಕೋಟೇಶ್ವರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ ಸ್ಕಿಡ್‌ : ಸಹ ಸವಾರಗೆ ಗಾಯ
ಕುಂದಾಪುರ: ಇಲ್ಲಿನ ಸಂಗಮ್‌ ಬಳಿಯ ರಾ.ಹೆ. 66 ರಲ್ಲಿ ಶಿವರಾಮ ಅವರು ಚಲಾಯಿಸುತ್ತಿದ್ದ ಬೈಕ್‌ ಸ್ಕಿಡ್‌ ಆಗಿ ಬಿದ್ದ ಪರಿಣಾಮ ಸಹ ಸವಾರ ರಿತೇಶ್‌ ಗಾಯಗೊಂಡ ಘಟನೆ ಫೆ. 26 ರ ಸಂಜೆ 4.15 ರ ಸುಮಾರಿಗೆ ಸಂಭವಿಸಿದೆ.

ಗಾಯಗೊಂಡ ರಿತೇಶ್‌ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಮ್ಮಾಡಿ : ಬಾವಿಗೆ ಬಿದ್ದು ವೃದ್ಧೆ ಸಾವು
ಕುಂದಾಪುರ: ಹೆಮ್ಮಾಡಿ ಗ್ರಾಮದ ಗುಂಡಿಕೊಡ್ಲು ನಿವಾಸಿ ಕೊರತಿ (84) ಅವರಿಗೆ ಚಿಕ್ಕಂದಿನಿಂದಲೇ ಕಣ್ಣು ಕಾಣದೇ ಇದ್ದು, ಇದರಿಂದಲೇ ಮನೆಯ ಬಾವಿಗೆ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ ಘಟನೆ ಫೆ. 27 ರಂದು ಸಂಭವಿಸಿದೆ.

Advertisement

ಮೃತರ ಮೊಮ್ಮಗ ವಿಘ್ನೇಶ್‌ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next