Advertisement

228 ಲೀಟರ್‌ ಮದ್ಯ ವಶ ಪ್ರಕರಣ: ತಲೆಮರೆಸಿಕೊಂಡ ಆರೋಪಿ ಸೆರೆ

09:29 PM May 09, 2022 | Team Udayavani |

ಬದಿಯಡ್ಕ: 228 ಲೀಟರ್‌ ವಿದೇಶಿ ಮದ್ಯ ವಶ ಪಡಿಸಿಕೊಂಡ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.

Advertisement

ಪೆರಡಾಲ ಬಳಿಯ ಚುಕ್ಕಿನಡ್ಕ ನಿವಾಸಿ ಅನುಷ್ಯತ್‌ ಬಂಧಿತ ಆರೋಪಿ. ಬದಿಯಡ್ಕ ಅಬಕಾರಿ ರೇಂಜ್‌ ಇನ್ಸ್ಪೆಕ್ಟರ್ ವಿನು ಎಚ್‌. ಹಾಗೂ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ರಹಸ್ಯ ಕೇಂದ್ರದಿಂದ ಬಂಧಿಸಲಾಗಿದೆ.

ಕಳೆದ ಎಪ್ರಿಲ್‌ 11 ರಂದು ಪೆರಡಾಲ ಬಳಿಯಿಂದ ಮದ್ಯ ವಶಪಡಿಸಲಾಗಿತ್ತು. ಈ ಪ್ರಕರಣದಲ್ಲಿ ಪಟ್ಟಾಜೆ ನಿವಾಸಿ ಸತ್ಯನಾರಾಯಣ(32) ನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದರು.

ಇದನ್ನೂ ಓದಿ:ಬೈಕಾಡಿ : ಮಾನಸಿಕ ಖಿನ್ನತೆಗೆ ಒಳಗಾಗಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಈ ವೇಳೆ ಅನುಷ್ಯತ್‌ ಪರಾರಿಯಾಗಿದ್ದನು. ಇಂದಿನ ಕಾರ್ಯಾಚರಣೆಯಲ್ಲಿ ಇತರ ಸಿಬಂದಿಗಳಾದ ಅಫ್ಸಲ್‌, ಜನಾರ್ದನ, ಅಮಲ್‌ ಜಿತ್‌, ಶರತ್‌ ಎಸ್‌.ನಾಯರ್‌, ಜಿಬಿನ್‌ ಮೊದಲಾದವರು ಭಾಗವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next