Advertisement

ಪತ್ನಿಯನ್ನು ಕೊಲೆ ಮಾಡಿ ಪಕ್ಕದ ಮನೆಯವರ ಜಮೀನಿನಲ್ಲಿ ಹೂತು ಹಾಕಿದ ಪತಿ!

10:35 AM Aug 21, 2021 | Team Udayavani |

ಮಂಡ್ಯ: ಮಳವಳ್ಳಿ ತಾಲ್ಲೂಕಿನ ಕಲ್ಲುವೀರನಹಳ್ಳಿ ಗ್ರಾಮದಲ್ಲಿ ಗಂಡನೇ ಹೆಂಡತಿಯನ್ನು ಕೊಲೆ ಮಾಡಿ ಶವವನ್ನು ಬೇರೆಯವರ ಜಮೀನಿನಲ್ಲಿ ಹೊತು ಹಾಕಿ ಪರಾರಿಯಾಗಿರುವ ಘಟನೆ ನಡೆದಿದೆ.

Advertisement

ಕಲ್ಲುವೀರನಹಳ್ಳಿ ಗ್ರಾಮದ ಶಿವರಾಜು ಎಂಬುವವರು ಪತ್ನಿ ರಾಣಿ (30 ವ)ಯನ್ನು ಮನೆಯಲ್ಲಿ‌ ಶುಕ್ರವಾರ ಸಂಜೆ ಕೊಲೆ ಮಾಡಿ ಶವವನ್ನು ಮನೆಯ ರೂಮಿನಲ್ಲಿ ಇಟ್ಟು ನಂತರ ಮಧ್ಯೆ ರಾತ್ರಿ ವೇಳೆ ಶಿವರಾಜು ಪಕ್ಕದ ಸತೀಶ್ ಎಂಬುವವರ ಜಮೀನಿಗೆ ಶವವನ್ನು ಎಳೆದುಕೊಂಡು ತಂದು ಹೊತು ಹಾಕಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ:ಮದ್ಯದ ಅಮಲಿನಲ್ಲಿ ಸ್ನೇಹಿತನ ತಲೆ ಮೇಲೆ ಹಾಲೊಬ್ರಿಕ್ಸ್‌ ಎತ್ತಿ ಹಾಕಿ ಕೊಲೆ

ಶನಿವಾರ ಬೆಳಿಗ್ಗೆ ಶಿವರಾಜು ಧರಿಸಿದ್ದ ಬಟ್ಟೆಗಳು ರಕ್ತಸಿಕವಾಗಿತ್ತು ಎಂದು ಪಕ್ಕದ ನಿವಾಸಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಡಿ.ಪಿ.ಧನರಾಜ್, ಪಿಎಸ್ಐ ಡಿ.ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೊತು ಹಾಕಿರುವ ಶವವನ್ನು ಹೊರ ತೆಗೆಯಲು ಪೊಲೀಸರು ಸಿದ್ದತೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next