Advertisement

ಬಜರಂಗ ದಳ ಸಂಚಾಲಕನ ಹತ್ಯೆ ಸಂಚು ಪ್ರಕರಣ: ಆರೋಪಿಗಳ ಬಂಧನ, ವಿಚಾರಣೆ, ಬಿಡುಗಡೆ

11:55 PM Aug 02, 2022 | Team Udayavani |

ಕಾಪು: ಕಾಪು ಪ್ರಖಂಡ ಬಜರಂಗ ದಳ ಸಂಚಾಲಕ ಸುಧೀರ್‌ ಸೋನು ಅವರ ಮನೆಯ ಬಳಿ ಅನುಮಾನಾಸ್ಪದ ರೀತಿಯಲ್ಲಿ ತೆರಳಿದ್ದ ಯುವಕರಿಬ್ಬರನ್ನು ಶಿರ್ವ ಪೊಲೀಸರು ಸೋಮವಾರ ಬಂಧಿಸಿದ್ದು, ವಿಚಾರಣೆ ನಡೆಸಿ ಮಂಗಳವಾರ ಜಾಮೀನಿನ ಮೂಲಕ ಬಿಡುಗಡೆಗೊಳಿಸಿದ್ದಾರೆ.

Advertisement

ಮಜೂರು ಚಂದ್ರನಗರ ನಿವಾಸಿ ಅಶ್ರಫ್‌ ಯಾನೆ ಆಸಿ ಮತ್ತು ಕರಂದಾಡಿ ನಿವಾಸಿ ಸುಹೇಬ್‌ ಇಸ್ಮಾಯಿಲ್‌ ಬಂಧಿತರು. ಆರೋಪಿಗಳನ್ನು ಪೊಲೀಸರು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿತ್ತು. ಮಂಗಳವಾರ ಬಂಧಿತರಿಬ್ಬರನ್ನೂ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.

ಸುಧೀರ್‌ ಅವರ ಮನೆ ಬಳಿ ಮುಸ್ಲಿಂ ಯುವಕರು ಬಂದಿದ್ದರಿಂದ ಸಂಶಯಗೊಂಡ ಅವರು ಬಜರಂಗ ದಳ ಮುಖಂಡರನ್ನೊಳಗೊಂಡು ಕಾಪು ಪೊಲೀಸ್‌ ಠಾಣೆಗೆ ತೆರಳಿ, ತನ್ನ ಹತ್ಯೆಗೆ ಸಂಚು ರೂಪಿಸಿರುವ ಸಂಶಯವಿದೆ ಎಂದು ಲಿಖೀತ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಪೊಲೀಸರು ಸಂಶಯಿತ ವ್ಯಕ್ತಿಗಳನ್ನು ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next