Advertisement

ವಿಟ್ಲ: ಅಕ್ರಮ ಮಣ್ಣು ಸಾಗಾಟ; 7 ಲಾರಿ ಪೊಲೀಸರು ವಶಕ್ಕೆ

12:55 AM Jun 16, 2022 | Team Udayavani |

ವಿಟ್ಲ: ಕನ್ಯಾನ, ಕರೋಪಾಡಿ ಹಾಗೂ ಕರ್ನಾಟಕ ಗಡಿಭಾಗದಿಂದ ಆಂಧ್ರ ಪ್ರದೇಶಕ್ಕೆ ಮಣ್ಣು ಸಾಗಾಟ ಮಾಡುತ್ತಿದ್ದ ಏಳು ಬೃಹತ್‌ ಲಾರಿಗಳನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದು ಗಣಿ ಇಲಾಖೆಗೆ ಹಸ್ತಾಂತರಿಸಿದ್ದಾರೆ.

Advertisement

ಮುಡಿಪು ಸುತ್ತಮುತ್ತಲು ನಡೆಯುತ್ತಿದ್ದ ಮಣ್ಣು ಗಣಿಗಾರಿಕೆ ಈಗ ಈ ಪ್ರದೇಶದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ.

ಆರು ತಿಂಗಳಿಂದಲೂ ನಿರಂತರವಾಗಿ ಹಗಲು ರಾತ್ರಿ ಎನ್ನದೆ ನಡೆಯುತ್ತಿದ್ದ ಮಣ್ಣು ಸಾಗಾಟ ಪ್ರಕ್ರಿಯೆಗೆ ಮಂಗಳವಾರದಿಂದ ವಿಟ್ಲ ಪೊಲೀಸರು ತಡೆ ನೀಡಿದ್ದಾರೆ.

ಏಕಾಏಕಿ ಲಾರಿಗಳನ್ನು ತಪಾಸಣೆ ನಡೆಸಿ ವಶಕ್ಕೆ ಪಡೆಯುತ್ತಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next