Advertisement

ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಬೈಕ್‌ ಕಳವು

01:16 AM Jun 14, 2022 | Team Udayavani |

ಪುತ್ತೂರು: ಆರ್ಯಾಪು ಗ್ರಾಮದ ಸಂಪ್ಯದ ಮನೆಯೊಂದರಲ್ಲಿ ಎರಡು ಗಂಟೆ ಅವಧಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ಬೈಕ್‌ ಕಳವಾದ ಘಟನೆ ಜೂ. 12ರ ರಾತ್ರಿ ಬೆಳಕಿಗೆ ಬಂದಿದೆ.

Advertisement

ಆರ್ಯಾಪು ಗ್ರಾಮದ ಸಂಪ್ಯ ಅದ್ರಾಮ ಎಸ್‌. ಅವರ ಮನೆಯಲ್ಲಿ ಕಳವು ನಡೆದಿದೆ. ಜೂ. 12ರ ಸಂಜೆ ಕೊಡಾಜೆಯಲ್ಲಿ ಮೆಹಂದಿ ಕಾರ್ಯಕ್ರಮಕ್ಕೆಂದು ಮನೆಮಂದಿ ತೆರಳಿದ್ದು, ರಾತ್ರಿ ಮರಳಿ ಬಂದ ವೇಳೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಕಳ್ಳರು ಮನೆಯ ಬಾಗಿಲಿನ ಚಿಲಕವನ್ನು ಮುರಿದು ಕಪಾಟನ್ನು ತೆರದು ಚಿನ್ನದ ಬಳೆಗಳು, ನೆಕ್ಲೆಸ್‌, ಬೆಂಡೋಲೆ, ವಜ್ರದ ಉಂಗುರ ಸೇರಿದಂತೆ ಸುಮಾರು 6,74,600 ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ.

ಹಾಗೆಯೇ ಮನೆಯಂಗಳದಲ್ಲಿ ನಿಲ್ಲಿಸಿದ್ದ ಬೈಕ್‌ ಅನ್ನು ಕೂಡ ಕಳವು ಮಾಡಲಾಗಿದೆ. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next