Advertisement

ಕ್ರಿಕೆಟಿಗ ಶ್ರೀಶಾಂತ್‌ ಕೊಲ್ಲೂರು ಭೇಟಿ

01:24 AM Sep 15, 2019 | Team Udayavani |

ಕೊಲ್ಲೂರು: ಭಾರತೀಯ ಕ್ರಿಕೆಟ್‌ ತಂಡದ ಮಾಜಿ ವೇಗದ ಬೌಲರ್‌ ಹಾಗೂ ಚಿತ್ರನಟ ಶ್ರೀಶಾಂತ್‌ ಸಕುಟುಂಬಿಕರಾಗಿ ಶನಿವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ಶ್ರೀದೇವಿಯ ದರ್ಶನ ಪಡೆದು ವಿಶೇಷ ಪೂಜೆ, ಚಂಡಿಕಾ ಹೋಮ ನೆರವೇರಿಸಿದರು. ಅಧಿಧೀಕ್ಷಕ ರಾಮಕೃಷ್ಣ ಅಡಿಗ, ಸಮಿತಿ ಸದಸ್ಯ ರಮೇಶ ಗಾಣಿಗ ಕೊಲ್ಲೂರು, ಉದ್ಯಮಿ ವೆಂಕಟೇಶ ಕಿಣಿ, ದೇಗುಲದ ಪಿಆರ್‌ಒ ಜಯಕುಮಾರ್‌ ಅವರು ಶ್ರೀಶಾಂತ್‌ ದಂಪತಿಯನ್ನು ಗೌರವಿಸಿದರು.

Advertisement

ಸತತ 4 ದಿನಗಳಿಂದ ಕ್ಷೇತ್ರಕ್ಕೆ ಅಪಾರ ಭಕ್ತರು ಆಗಮಿಸುತ್ತಿದ್ದು ವಾಹನ ಸಂಚಾರ, ನಿಲುಗಡೆ ತ್ರಾಸವಾಯಿತು. ಶನಿವಾರ, ರವಿವಾರ ರಜಾ ದಿನ ವಾಗಿರುವುದರಿಂದ ಕರ್ನಾಟಕ, ಕೇರಳ, ತಮಿಳುನಾಡಿನಿಂದ ಅಪಾರ ಭಕ್ತರು ಆಗಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next