Advertisement

Cricket issue: ಮಾರಾಮಾರಿ;ಮೂವರ ಸೆರೆ

10:19 AM Aug 14, 2023 | Team Udayavani |

ಬೆಂಗಳೂರು: ಕ್ರಿಕೆಟ್‌ ಆಟದ ವಿಚಾರಕ್ಕೆ ಸ್ನೇಹಿತರೆ ಸಹೋದರರಿಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳ್ಳಂದೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಮೂವರು ಆರೋಪಿ ಗಳನ್ನು ಬಂಧಿಸಲಾಗಿದೆ.

Advertisement

ಕೂಡ್ಲು ನಿವಾಸಿಗಳಾದ ರಮೇಶ್‌, ಯಶ್ವಂತ್‌, ಪವನ್‌ ಬಂಧಿತರು. ಆರೋಪಿಗಳು ಸೋಮ ಸುಂದರಪಾಳ್ಯ ನಿವಾಸಿಗಳಾದ ಜೀವನ್‌ ಜೋಯೆಲ್‌ ಮತ್ತು ಜೋಸೆಫ್ ಎಂಬ ಸಹೋದರರ ಮೇಲೆ ಹಲ್ಲೆ ನಡೆಸಿದ್ದರು.

ಆರೋಪಿಗಳು ಹಾಗೂ ಸಹೋದರರು ಆಗಾಗ್ಗೆ ಸೋಮಸುಂದರಪಾಳ್ಯದಲ್ಲಿ ಕ್ರಿಕೆಟ್‌ ಆಡುತ್ತಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ರಮೇಶ್‌ ಮತ್ತು ಜೀವನ್‌ ನಡುವೆ ಕಿರಿಕ್‌ ನಡೆದಿದೆ. ಅಲ್ಲದೆ, ಜೀವನ್‌, ರಮೇಶ್‌ ಬಗ್ಗೆ ಬೇರೆ ಸ್ನೇಹಿತರ ಬಳಿ ಕೆಟ್ಟದಾಗಿ ಹೇಳಿದ್ದಾನೆ ಎಂದು ಹೇಳಲಾಗಿತ್ತು. ಅದರಿಂದ ಆಕ್ರೋಶಗೊಂಡ ರಮೇಶ್‌, ಆ.9ರಂದು ಮಾತನಾಡಬೇಕೆಂದು ಜೀವನ್‌ಗೆ ಕರೆ ಮಾಡಿ ಹರಳೂರು ರಸ್ತೆಯಲ್ಲಿರುವ ಬಿರಿಯಾನಿ ಅಂಗಡಿ ಬಳಿ ಬರುವಂತೆ ಹೇಳಿದ್ದಾನೆ. ಆಗ ಸಹೋದರ ಜೋಸೆಫ್ ಕೂಡ ಜತೆಯಲ್ಲಿ ಬಂದಿದ್ದಾನೆ.

ಈ ವೇಳೆ ಸಹೋದರರು ಮತ್ತು ಆರೋಪಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಅದು ವಿಕೋಪಕ್ಕೆ ಹೋದಾಗ ಆರೋಪಿಗಳು, ರಸ್ತೆ ಬದಿ ಆಹಾರ ಪದಾರ್ಥ ಮಾರುವ ಹೋಟೆಲ್‌ಗ‌ಳಲ್ಲಿದ್ದ ಅಡುಗೆ ಪಾತ್ರೆಗಳು, ನೀರಿನ ಕ್ಯಾನ್‌ ಸೇರಿ ಅಡುಗೆ ಸಾಮಾಗ್ರಿಗಳಿಂದ ಮನಸೋಇಚ್ಛೆ ಹಲ್ಲೆ ನಡೆಸಿದ್ದರು. ಸಹೋದರರ ಮೇಲಿನ ಹಲ್ಲೆ ದೃಶ್ಯಗಳು ಸ್ಥಳೀಯರ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್‌ ಆಗಿತ್ತು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮೂವರು ಅರೋಪಿಗಳನ್ನು ಬಂಧಿಸಿದ್ದಾರೆ ಎಂದು ಪೊಲೀಸರು ಹೇಳಿದರು. ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next