Advertisement

ಆರ್‌ಟಿಪಿಎಸ್‌ನಲ್ಲಿ ಅವಘಡ: ಒಡಿಶಾದ ಕಾರ್ಮಿಕ ಸಾವು

10:53 PM Nov 15, 2019 | Team Udayavani |

ರಾಯಚೂರು: ರಾಯಚೂರು ಶಾಖೋತ್ಪನ್ನ ಕೇಂದ್ರದ ಕಲ್ಲಿದ್ದಲು ಸಂಸ್ಕರಣಾ ಘಟಕದಲ್ಲಿ ಗುರುವಾರ ತಡರಾತ್ರಿ ಕಲ್ಲಿದ್ದಲು ಸಾಗಿಸುವ ಬೆಲ್ಟ್ನಲ್ಲಿ ಸಿಲುಕಿ ಒಡಿಶಾ ಮೂಲದ ಕಾರ್ಮಿಕ ಮೃತಪಟ್ಟಿದ್ದಾನೆ. ದೀಪಕ್‌ ನಾಯಕ (27) ಮೃತ ಕಾರ್ಮಿಕ. ಶಕ್ತಿನಗರದಲ್ಲಿ ವಾಸವಾಗಿದ್ದ ದೀಪಕ್‌, ಕಲ್ಲಿದ್ದಲು ಪೂರೈಸುವ ಸಂಸ್ಕರಣಾ ಘಟಕ (ಕೂಲ್‌ ಯಾರ್ಡ್‌)ನಲ್ಲಿ ಕೆಲಸ ಮಾಡುತ್ತಿದ್ದ. ಕಲ್ಲಿದ್ದಲಿನ ಜತೆಗೆ ಬರುವ ಕಲ್ಲುಗಳನ್ನು ಬೇರ್ಪಡಿಸುವ ಕೆಲಸ ಮಾಡುತ್ತಿದ್ದ ವೇಳೆ ಆಯ ತಪ್ಪಿ ಬೆಲ್ಟ್ಗೆ ಸಿಲುಕಿಕೊಂಡಿದ್ದಾನೆ.

Advertisement

ದೇಹ ಗುರುತು ಸಿಗದಂತಾಗಿದೆ. ಈ ಘಟನೆ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತದೇಹವನ್ನು ರಿಮ್ಸ್‌ಗೆ ಸಾಗಿಸಲಾಗಿದೆ. ಶಕ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಘಟನೆಗೆ ಆಡಳಿತ ಮಂಡಳಿ ನಿರ್ಲಕ್ಷ ಧೋರಣೆಯೇ ಕಾರಣ. ಕಡಿಮೆ ವೇತನಕ್ಕೆ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದು, ಸೂಕ್ತ ರಕ್ಷಣೆ ಕೂಡ ಒದಗಿಸುತ್ತಿಲ್ಲ ಎಂದು ಸಂಘಟನೆಗಳು ಆರೋಪಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next