Advertisement

ಮರಳು ದಿಬ್ಬಕ್ಕೆ ಢಿಕ್ಕಿ: ಬೋಟ್‌ ಮುಳುಗಡೆ

11:06 AM May 26, 2017 | |

ಉಳ್ಳಾಲ: ಮಂಗಳೂರಿನ ದಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳುತ್ತಿದ್ದ ತೆರಳುತ್ತಿದ್ದ ಬೋಟ್‌ ಉಳ್ಳಾಲ ಅಳಿವೆ ಬಾಗಿಲಿನಲ್ಲಿ ಮರಳು ದಿಬ್ಬಕ್ಕೆ ಢಿಕ್ಕಿ ಹೊಡೆದು ಸಮುದ್ರದಲ್ಲಿ ಮುಳುಗಿದ ಘಟನೆ ಬುಧವಾರ ತಡರಾತ್ರಿ ನಡೆದಿದ್ದು, ಬೋಟಿನಲ್ಲಿದ್ದ 10 ಮಂದಿ ಮೀನುಗಾರರನ್ನು ಇನ್ನೊಂದು ಮೀನುಗಾರಿಕಾ ಬೋಟಿನವರು ರಕ್ಷಿಸಿದ್ದಾರೆ. ಮಂಗಳೂರಿನ ಲೋಕನಾಥ ಬೋಳಾರ್‌ ಅವರಿಗೆ ಸೇರಿದ “ಎಚ್‌.ಎಂ.ಎಲ್‌’ಮೀನುಗಾರಿಕಾ ಬೋಟ್‌ ಆಳಸಮುದ್ರ ಮೀನುಗಾರಿಕೆಗೆಂದು ಬುಧವಾರ ರಾತ್ರಿ ಹೊರಟಿದ್ದು, ಮೀನುಗಾರಿಕೆಗೆ ಹೊರಟ ಕೆಲವೇ ಗಂಟೆಗಳಲ್ಲಿ ಅಪಘಾತ ಸಂಭವಿಸಿತ್ತು.
 
ಬೋಟ್‌ ಮರಳು ದಿಬ್ಬಕ್ಕೆ ಢಿಕ್ಕಿ ಹೊಡೆಯುತ್ತಿದ್ದಂತೆ ಬೋಟ್‌ ಒಡೆದು ಮುಳುಗಲು ಆರಂಭವಾಗಿದ್ದು, ಮಾಹಿತಿ ಸಿಗುತ್ತಿದ್ದಂತೆ ಬೇರೆ ಬೋಟ್‌ನವರು ಆಗಮಿಸಿ ಬೋಟ್‌ನಲ್ಲಿದ್ದ  10 ಮಂದಿ ಮೀನುಗಾರರು ರಕ್ಷಣೆ ಮಾಡಿದರು. ಘಟನೆಯಿಂದ ಬೋಟ್‌ ಮಾಲಕರಿಗೆ ರೂ. 70 ಲಕ್ಷ ನಷ್ಟ ಉಂಟಾಗಿದೆ. ಮಂಗಳೂರಿನ ಬಂದರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next