Advertisement

ಸೀಗೋಡು ರಸ್ತೆ ಮಧ್ಯದಲ್ಲಿ ಬಿರುಕು: ಜನರಲ್ಲಿ ಆತಂಕ

02:45 PM Dec 17, 2019 | Suhan S |

ಬಾಳೆಹೊನ್ನೂರು: ವಿರಾಜ್‌ ಪೇಟೆ-ಬೈಂದೂರು ರಾಜ್ಯ ಹೆದ್ದಾರಿಯ ಇಟ್ಟಿಗೆ ಸೀಗೋಡಿನ ಬಳಿ ರಸ್ತೆ ಮಧ್ಯದಲ್ಲಿ ಬಿರುಕು ಬಿಟ್ಟಿದ್ದು, ರಸ್ತೆ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ.

Advertisement

ಖಾಸಗಿ ವ್ಯಕ್ತಿಯೋರ್ವರು ರಾತ್ರಿ ವೇಳೆ ಕೊಳವೆ ಬಾವಿ ಕೊರೆಸಿದ ನಂತರ ರಸ್ತೆಯಲ್ಲಿ ಬಿರುಕು ಕಣಿಸಿಕೊಂಡಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ ದಾವುದ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಥಿಲಗೊಂಡ ಮೋರಿಯನ್ನು ತೆರವುಗೊಳಿಸಿ ಹ್ಯೂಮ್‌ ಪೈಪ್‌ ಅಳವಡಿಸಿ ಕಾಮಗಾರಿ ಮಾಡಿಸಲಾಗುವುದೆಂದು ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next