Advertisement

ದಾಸ್‌ ಗುಪ್ತ ನಿಧನ

12:45 AM Nov 01, 2019 | Hari Prasad |

ಕೋಲ್ಕತಾ: ದೇಶದಲ್ಲಿ ನಡೆದ ಕಾರ್ಮಿಕ ಚಳವಳಿಯ ರೂವಾರಿಗಳಲ್ಲಿ ಓರ್ವರಾದ, ಸಿಪಿಐ ಹಿರಿಯ ನಾಯಕ, ಮಾಜಿ ಸಂಸದ ಗುರುದಾಸ್‌ ದಾಸ್‌ಗುಪ್ತ (83) ಗುರುವಾರ ಕೋಲ್ಕತಾದ ನಿವಾಸದಲ್ಲಿ ಕೊನೆಯುಸಿರೆಳೆದರು.

Advertisement

ಹಲವು ದಿನಗಳಿಂದ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಸುದೀರ್ಘ‌ ರಾಜಕೀಯ ಮತ್ತು ಹೋರಾಟದ ಇತಿಹಾಸ ಹೊಂದಿರುವ ಅವರು 1985ರಿಂದ ಈವರೆಗೆ 5 ಬಾರಿ ಸಂಸದರಾಗಿದ್ದರು. ಅನಾರೋಗ್ಯದ ಕಾರಣ ಹೇಳಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next