Advertisement

ಕೋವಿಡ್ 19ಭೀತಿಗೆ ಹಳ್ಳಿ ಜನರ ಸ್ವಯಂ ದಿಗ್ಬಂಧನ

04:18 PM Mar 27, 2020 | Team Udayavani |

ರಾಯಚೂರು: ಎಲ್ಲೆಡೆ ಅವಾಂತರ ಸೃಷ್ಟಿಸಿರುವ ಕೋವಿಡ್ 19 ಮಹಾಮಾರಿ ನಮ್ಮೂರಿಗೆ ಯಾವುದೇ ಕಾರಣಕ್ಕೂ ಕಾಲಿಡಬಾರದು ಎಂದು ಕೆಲ ಗ್ರಾಮಸ್ಥರು ಸ್ವಯಂ ದಿಗ್ಬಂಧನ ಹಾಕಿಕೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ.

Advertisement

ತಮ್ಮ ಊರಿನ ಮುಖ್ಯರಸ್ತೆಗೆ ಅಡ್ಡವಾಗಿ ಮುಳ್ಳು ಬೇಲಿ ಹಾಕುವ ಮೂಲಕ ಸಂಚಾರ ಸ್ಥಗಿತಗೊಳಿಸಿದ್ದಾರೆ. ತಾಲೂಕಿನ ಕರೆಕಲ್ಲು, ಚಿಕ್ಕಮಂಚಾಲಿ, ಸಿಂಧನೂರು ತಾಲೂಕಿನ ಮಲ್ಲಾಪುರ ಲಿಂಗಸೂಗೂರು ತಾಲೂಕಿನ ಕೆಲ ಗ್ರಾಮಗಳು ಸ್ವಯಂ ನಿರ್ಬಂಧ ಹೇರಿಕೊಂಡಿವೆ. ಚಿಕ್ಕಮಂಚಾಲಿ ಗ್ರಾಮ ಗಡಿಭಾಗವಾದ್ದರಿಂದ ಆಂಧ್ರದಿಂದ ಯಾರು ನಮ್ಮ ಊರಿಗೆ ಬರಬಾರದು ಎನ್ನುವ ಕಾರಣಕ್ಕೆ ಹಾಕಿದ್ದಾಗಿ ತಿಳಿಸುತ್ತಾರೆ ಗ್ರಾಮಸ್ಥರು. ಮನ್ಸಲಾಪುರ ಗ್ರಾಮದಲ್ಲಿ ಬೆಳಗ್ಗೆ ರಸ್ತೆ ಬಂದ್‌ ಮಾಡಲಾಗಿತ್ತು. ಬಳಿಕ ಗ್ರಾಮಸ್ಥರಲ್ಲೇ ಭಿನ್ನಾಭಿಪ್ರಾಯ ಮೂಡಿದ್ದರಿಂದ ತೆರವುಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next