Advertisement

ಚಿಕ್ಕಮಗಳೂರಿನಲ್ಲೂ ಕೋವಿಡ್ ಯೋಧರ ಮೇಲೆ ಹಲ್ಲೆ: ಪೌರಕಾರ್ಮಿಕರ ಮೇಲೆ ಏಕಾಏಕಿ ಹಲ್ಲೆ

10:01 AM Apr 22, 2020 | keerthan |

ಚಿಕ್ಕಮಗಳೂರು: ಸಮಾಜದ ಹಿತಕ್ಕಾಗಿ ದುಡಿಯುವ ಕೋವಿಡ್ ಯೋಧರ ಮೇಲೆ ಹಲ್ಲೆ ಮಾಡುವ ಚಾಳಿ ಚಿಕ್ಕಮಗಳೂರಿಗೂ ಹಬ್ಬಿದೆ. ಇಲ್ಲಿನ ಉಪ್ಪಳ್ಳಿ ಮಸೀದಿ ಬಳಿ ಪೌರ ಕಾರ್ಮಿಕರ ಮೇಲೆ ಹಲ್ಲೆ ಮಾಡಲಾಗಿದೆ.

Advertisement

ಚಿಕ್ಕಮಗಳೂರು ನಗರದ ಉಪ್ಪಳ್ಳಿ ಮಸೀದಿ ಬಳಿ ಪೌರಕಾರ್ಮಿಕರು ಕಸ ಸಂಗ್ರಹಿಸುತ್ತಿದ್ದರು. ಆ ವೇಳೆ ಕಿಡಿಗೇಡಿಗಳು ಏಕಾಏಕಿ ಹಲ್ಲೆನಡೆಸಿದ್ದಾರೆ.

ಪೌರ ಕಾರ್ಮಿಕರು ಕೋವಿಡ್-19 ಸೋಂಕು ಜಾಗೃತಿ ಹಾಡು ಹಾಕಿಕೊಂಡು ಕಸ ಸಂಗ್ರಹಿಸುತ್ತಿದ್ದರು.

ಪೌರಕಾರ್ಮಿಕರಾದ ಮಂಜುನಾಥ್ ಅವರಿಗೆ ಹಲ್ಲೆ ಮಾಡಲಾಗಿದ್ದು, ಮಹಿಳಾ ಕಾರ್ಮಿಕ ಗೀತಾ ಎನ್ನುವವರಿಗೆ ಬೆದರಿಕೆ ಹಾಕಲಾಗಿದೆ. ತೀವ್ರ ಹಲ್ಲೆಗೊಳಗಾದ ಪೌರಕಾರ್ಮಿಕ ಮಂಜುನಾಥ್ ರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ವೇಳೆ ಹಲ್ಲೆ ಮಾಡಿದ ವ್ಯಕ್ತಿಗೆ ಹಲವು ಪೌರಕಾರ್ಮಿಕರಿಂದಲೂ ಮರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಆರೋಪಿ ಸ್ಥಳದಿಂದ ನಾಪತ್ತೆಯಾಗಿದ್ದು ಚಿಕ್ಕಮಗಳೂರು ನಗರದ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next