Advertisement

ಯಾರ ಹೆಗಲಾದರೂ ಏರಬಲ್ಲದು ಕೋವಿಡ್

11:13 AM Jun 28, 2020 | sudhir |

ಹೊಸದಿಲ್ಲಿ: ಆರಂಭದಲ್ಲೆಲ್ಲಾ 60 ವರ್ಷ ಮೇಲ್ಪಟ್ಟವರು, ಮಕ್ಕಳಿಗೆ ಕೋವಿಡ್ ವೈರಸ್‌ ಅಂಟಿಕೊಳ್ಳುವ ಅಪಾಯ ಹೆಚ್ಚು ಎಂದು ಹೇಳಲಾಗುತ್ತಿತ್ತು. ಆದರೆ, ಸೋಂಕಿತರ ಸಂಖ್ಯೆ ಹೆಚ್ಚಾ­ದಂತೆಲ್ಲಾ ಸೋಂಕು ತಗುಲುವ ಅಪಾಯ ಹೊಂದಿರುವವರ ಪಟ್ಟಿ ಕೂಡ ಬೆಳೆಯುತ್ತಿದೆ. ಈಗ ಗರ್ಭಿಣಿಯರು, ಬೊಜ್ಜು ದೇಹ ಹೊಂದಿರುವವರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಬಹುಬೇಗ ಕೊರೊನಾ ವೈರಾಣುವಿನ ಕೆಂಗಣ್ಣಿಗೆ ಬೀಳು ತ್ತಾರೆ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ಹೇಳಿದೆ.

Advertisement

ಮೇಲಿನ ಮೂವರು ಮಾತ್ರವಲ್ಲ, ಕಿಡ್ನಿಗೆ ಸಂಬಂಧಿಸಿದ ಕಾಯಿಲೆ, ಧೀರ್ಘ‌ಕಾಲದ ಶ್ವಾಸಕೋಶದ ಸಮಸ್ಯೆ (ಸಿಒಪಿಡಿ), ಕೆಂಪು ರಕ್ತ ಕಣಗಳಿಗೆ ಸಂಬಂಧಿಸಿದ ಸಿಕಲ್‌ ಸೆಲ್‌ ಅನಿಮಿಯ, ಅಂಗಾಂಗ ಕಸಿ ಪ್ರಕ್ರಿಯೆಗೆ ಒಳ­ಪಟ್ಟವರು, ಟೆ„ಪ್‌ 2 ಮಧುಮೇಹ ಹೊಂದಿ­ರು­ವವರು ಸಹ ಕೋವಿಡ್ ಅಪಾಯಕ್ಕೆ ತೀರಾ ಹತ್ತಿರದಲ್ಲಿದ್ದಾರೆ. ಈ ಸಮಸ್ಯೆಗಳನ್ನು ಹೊಂದಿ­ರುವವರ ವಯಸ್ಸು ಎಷ್ಟೇ ಆಗಿದ್ದರೂ, ಯಾವುದೇ ಸಂದರ್ಭದ­ಲ್ಲಾದರೂ ಸೋಂಕು ತಗುಲಬಹುದು ಎಂದು ಸಿ.ಡಿ.ಸಿ. ಸಂಶೋ­ಧಕರು ಹೇಳಿದ್ದಾರೆ.
ಇದೇ ವೇಳೆ, “”ಅಸ್ತಮಾ ಸೇರಿ ಶ್ವಾಸ­ಕೋಶದ ಇತರ ಎಲ್ಲ ಕಾಯಿಲೆಗಳು, ನರ­ವಿಜ್ಞಾನಕ್ಕೆ ಸಂಬಂಧಿಸಿದ ಸಮಸ್ಯೆಗಳು, ಪಿತ್ತ­ಜನಕಾಂಗದ ತೊಂದರೆ ಹೊಂದಿರುವವರು ಹಾಗೂ ಈ ಹಿಂದೆ ಪಾರ್ಶ್ವವಾಯುವಿಗೆ ತುತ್ತಾ­ದ­ವರಿಗೂ ಸೋಂಕು ತಗುಲುವ‌ ಅಪಾಯ­ವಿದೆ. ರೋಗ ನಿರೋಧಕ ವ್ಯವಸ್ಥೆ ಉತ್ತಮ­ವಾಗಿದ್ದರೆ ಮಾತ್ರ ಈ ಸೋಂಕಿನಿಂದ ಪಾರಾಗ­ಬಹುದು” ಎಂದು ಸಿಡಿಸಿ ಉಪನಿರ್ದೇಶಕ ಡಾ| ಜೇಯ್‌ ಬಟ್ಲರ್‌ ಹೇಳಿದ್ದಾರೆ.

ಡೆಕ್ಸಾಮೆಥಾಸೋನ್‌ ಬಳಕೆಗೆ ಅನುಮತಿ
ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ಕಡಿಮೆ ಬೆಲೆಯ ಸ್ಟಿರಾಯ್ಡ, ಡೆಕ್ಸಾಮೆಥಾಸೋನ್‌ ಬಳಕೆಗೆ ಕೇಂದ್ರ ಸರಕಾರ ಅನುಮತಿ ನೀಡಿದೆ.

ಮಧ್ಯಮ ಮತ್ತು ಗಂಭೀರ ಅನಾರೋಗ್ಯಕ್ಕೆ ಒಳಗಾಗಿರುವ ರೋಗಿಗಳಿಗೆ ಮಿಥೈಲ್‌ಪ್ರಡ್ನಿಸೊ­ಲೋನ್‌ಗೆ ಬದಲು ಡೆಕ್ಸಾಮೆಥಾ­ಸೋನ್‌ ಬಳಸುವಂತೆ ಸೂಚಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಕೋವಿಡ್ ಕ್ಲಿನಿಕಲ್‌ ಪ್ರೋಟೊಕಾಲ್‌ ಪರಿಷ್ಕರಿಸಿದ್ದು, ಡೆಕ್ಸಾಮೆಥಾಸೋನ್‌ ಬಳಕೆಗೆ ಶಿಫಾರಸ್ಸು ಮಾಡಿದೆ. ಈಗಾಗಲೇ ಡೆಕ್ಸಾಮೆಥಾಸೋನ್‌ನ್ನು ಸಂಧಿವಾತ ಸೇರಿ­ದಂತೆ ಹಲವು ರೋಗಗಳ ಚಿಕಿತ್ಸೆ ವೇಳೆ ಉರಿಯೂತ ಶಮನಕ್ಕಾಗಿ ಬಳಸಲಾಗುತ್ತದೆ. ಇದೀಗ ಕೋವಿಡ್ ಚಿಕಿತ್ಸೆಗೂ ಇದನ್ನು ಬಳಸಲು ಶಿಫಾರಸ್ಸು ಮಾಡಲಾಗಿದೆ. ಆಮ್ಲಜನಕದ ಪೂರೈಕೆಯ ಅಗತ್ಯವಿರುವ ಮತ್ತು ಅತಿಯಾದ ಉರಿಯೂತದ ಸಮಸ್ಯೆ ಹೊಂದಿರುವ ಕೋವಿಡ್ ರೋಗಿಗಳಿಗೆ ಇದನ್ನು ಬಳಸಬಹುದು ಎಂದು ತಿಳಿಸಲಾ­ಗಿದೆ. ಕಳೆದ 60 ವರ್ಷಗಳಿಂದ ಕಡಿಮೆ ಡೋಸ್‌ನ ಡೆಕ್ಸಾಮೆಥಾಸೋನ್‌ ಮಾರುಕಟ್ಟೆ­ಯಲ್ಲಿ ಲಭ್ಯವಿದ್ದು, ಅತ್ಯಂತ ಅಗ್ಗದ ಔಷಧ­ವಾಗಿದೆ. ಕೋವಿಡ್ ಚಿಕಿತ್ಸೆಯಲ್ಲಿ ಇದು ಪರಿಣಾಮಕಾರಿ ಎಂಬುದು ಪ್ರಾಯೋಗಿಕ ಪರೀಕ್ಷೆಗಳಲ್ಲಿ ಸಾಬೀತಾಗಿದೆ. ಜೀವನ್ಮರಣ ಹೋರಾಟ ನಡೆಸುತ್ತಿರುವ ರೋಗಿಗಳಿಗೆ ಇದನ್ನು ನೀಡಿದಾಗ ರೋಗಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಸಚಿವಾಲಯ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next