Advertisement

ಕೋವಿಡ್‌ ಲಸಿಕಾಕರಣ ಹೆಚ್ಚಿಸಲು ಮುಂದಾಗಿ

06:28 PM Apr 11, 2021 | Team Udayavani |

ಗದಗ: ಕೋವಿಡ್‌ ಸೋಂಕು ತಗುಲಿ ಸಂಭವಿಸಬಹುದಾದ ಜೀವಹಾನಿಯನ್ನು ತಪ್ಪಿಸಲು ಸಾರ್ವಜನಿಕರಿಗೆ ಹೆಚ್ಚು ಹೆಚ್ಚು ಲಸಿಕೆ ನೀಡುವ ಪ್ರಕ್ರಿಯೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಸೂಚಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ವಿಡಿಯೋ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಹಾಗೂ ವಿವಿಧ ತಾಲೂಕು ಅಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಪ್ರಮಾಣ ವಿವಿಧ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಕಡಿಮೆ ಇದೆ. ಆದರೆ, ಸಾರ್ವಜನಿಕರು ಸೋಂಕುಸಂಪೂರ್ಣ ಮಾಯವಾಗಿದೆ ಎಂದು ಕೋವಿಡ್‌ ಮಾರ್ಗಸೂಚಿಗಳ ಉಲ್ಲಂಘನೆ ಮಾಡದಿರುವಂತೆಅಧಿಕಾರಿಗಳು ನಿಗಾ ವಹಿಸಬೇಕು. ಕೋವಿಡ್‌ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಅವರನ್ನು

ಪರೀಕ್ಷೆಗೊಳಪಡಿಸುವ ಮೂಲಕ ಸೋಂಕು ಇತರರಿಗೆ ಹರಡದಂತೆ ಕ್ರಮ ವಹಿಸಬೇಕು. ಮಾರ್ಗಸೂಚಿ ಉಲ್ಲಂಘಿಸುವವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ ಅನುಸಾರ ಶಿಸ್ತು ಕ್ರಮ ಜರುಗಿಸಬೇಕು. ನಿಯಮಾನುಸಾರ ದಂಡ ವಿಧಿಸುವ ಮೂಲಕಸಾರ್ವಜನಿಕರಲ್ಲಿ ಕೋವಿಡ್‌ ಮಾರ್ಗಸೂಚಿಗಳ ಪಾಲನೆಯಾಗುವಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರು.

ಕೋವಿಡ್‌ ಸೋಂಕಿತರನ್ನು ಸಾಧ್ಯವಾದಷ್ಟು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕು.ಸೋಂಕಿತನ ದೈಹಿಕ ಸ್ಥಿತಗನುಗುಣವಾಗಿ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಮಾತ್ರ ಜಿಮ್ಸ್‌ ಆಸ್ಪತ್ರೆಗೆ ಕಳುಹಿಸುವಂತೆ ತಾಲೂಕು ಆಡಳಿತಗಳಿಗೆಸೂಚಿಸಿದರು. ಅಲ್ಲದೇ, ಸೋಂಕಿತರ ಪ್ರಾಥಮಿಕ ಹಾಗೂ ದ್ವೀತಿಯ ಸಂಪರ್ಕಿತರಿಗೆ ಹೋಂ ಐಸೋಲೇಶನ್‌ ಇರಿಸಿ ಕಾಲಕಾಲಕ್ಕೆ ಹೋಂಐಸೋಲೇಶನ್‌ನಲ್ಲಿರುವವರನ್ನು ನಿಗಾ ವಹಿಸುವಂತೆ ತಿಳಿಸಿದರು.

Advertisement

ಪ್ರಥಮ ಹಂತದಲ್ಲಿ ಲಸಿಕೆ ಪಡೆದ ಮುಂಚೂಣಿ ಆರೋಗ್ಯ ಕಾರ್ಯಕರ್ತರು ನಿಗದಿತ ಅವಧಿಗೆ 2ನೇ ಡೋಸ್‌ ಲಸಿಕೆ ಪಡೆದುಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಪಂಚಾಯತ್‌ ಸದಸ್ಯರಿಗೆ ಲಸಿಕೆ ನೀಡಿ ಗ್ರಾಮದ ಇತರರು ಲಸಿಕೆ ಪಡೆಯಲು ಪ್ರೇರೇಪಿಸಬೇಕು. ಅದೇ ರೀತಿ, ಪಟ್ಟಣ ಪ್ರದೇಶದ ವಾರ್ಡ್‌ ಸದಸ್ಯರಿಗೆ ಲಸಿಕೆ ನೀಡುವುದರಮೂಲಕ ಲಸಿಕೆ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸಮೂಡಿಸುವ ಕಾರ್ಯದೊಂದಿಗೆ ಲಸಿಕೆಪ್ರಕ್ರಿಯೆ ತೀವ್ರಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಗೊಂದು ಗೋಶಾಲೆ ಆರಂಭಿಸುವಂತೆ ಸರ್ಕಾರದ ಆದೇಶವಾಗಿದ್ದು ಗೋಶಾಲೆ ಆರಂಭಕ್ಕೆ 20ರಿಂದ 25ಎಕರೆ ಜಮೀನು ಇರಬೇಕು. ಹಾಗೂ ನೀರಿನ ಸೌಕರ್ಯ ದೊರೆಯುವಂತಹ ಸ್ಥಳಗಳಲ್ಲಿಗೋಶಾಲೆ ನಿರ್ಮಾಣಕ್ಕೆ ಮುಂದಾಗುವಂತೆ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಮನಗೂಳಿ ಅವರಿಗೆ ಸೂಚಿಸಿದರು.

ಪಿ.ಎಂ.ಸ್ವ ನಿಧಿ ಯೋಜನೆಯ ಪ್ರಗತಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಪ್ರಗತಿ ಕುಂಠಿತವಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಸ್ಥಳೀಯ ಸಂಸ್ಥೆಯ ಮುಖ್ಯಸ್ಥರು ಈ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಫ್ರೊಟ್‌ ತಂತ್ರಾಂಶ ನೋಂದಣಿಯಲ್ಲಿ ನರಗುಂದ ತಾಲೂಕು ಉತ್ತಮ ಸಾಧನೆಗೈದಿದ್ದು, ಉಳಿದ ತಾಲೂಕುಗಳಲ್ಲಿಯೂ ನೊಂದಣಿ ಕಾರ್ಯ ಪೂರ್ಣಗೊಳಿಸುವಂತೆ ಹೇಳಿದರು.

ಭೂಮಿ ಯೋಜನೆಯಡಿ ರಾಜ್ಯದಲ್ಲಿ ಗದಗ ಜಿಲ್ಲೆ 5 ನೇ ಸ್ಥಾನದಲ್ಲಿದೆ ತಾಲೂಕಾ ಮಟ್ಟದಲ್ಲಿ ಭೂಮಿ ಯೋಜನೆ ಅನುಷ್ಟಾನ ಇನ್ನೂ ಹೆಚ್ಚಿನ ಪ್ರಗತಿ ಸಾಸ ಬೇಕೆಂದರು. ಕಂದಾಯ ನಿರೀಕ್ಷಕರು ಭೂಮಿಅನುಷ್ಠಾನದಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ .ಅಂತಹವರನ್ನು ಗುರುತಿಸಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಅಪರ ಜಿಲ್ಲಾಧಿಕಾರಿ ಸತೀಶಕುಮಾರ್‌ ಎಂ. ಮಾತನಾಡಿ, ಸಕಾಲ ಯೋಜನೆಯಡಿ 83 ಕಚೇರಿಗಳಲ್ಲಿ ಶೂನ್ಯ ಅರ್ಜಿ ಸ್ವೀಕೃತವಾಗುತ್ತಿವೆ.ಸಂಬಂಧಪಟ್ಟ ಇಲಾಖೆಗಳು ಸಕಾಲದಲ್ಲಿ ಅರ್ಜಿ ಸ್ವೀಕರಿಸಿ, ವಿಲೇವಾರಿ ಮಾಡಬೇಕು ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಡಿ.ಡಿ.ಎಲ್‌.ಆರ್‌. ರವಿಕುಮಾರ್‌,ಡಿ.ಯು.ಡಿ.ಸಿ. ಯೋಜನಾ ನಿರ್ದೇಶಕ ಅನಿಲಕುಮಾರ್‌ ಮುದ್ದಾ, ಡಿಎಚ್‌ಒ ಡಾ|ಸತೀಶಬಸರಿಗಿಡದ, ನಗರಸಭೆ ಪೌರಾಯುಕ್ತ ರಮೇಶಜಾಧವ ಸೇರಿದಂತೆ ತಹಶೀಲ್ದಾರ್‌ರು,ಕಾರ್ಯನಿರ್ವಾಹಕ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರುಹ

Advertisement

Udayavani is now on Telegram. Click here to join our channel and stay updated with the latest news.

Next