Advertisement

ಮಕ್ಕಳಿಗೆ ಲಸಿಕೆ: ಉಡುಪಿಗೆ 3ನೇ, ದ.ಕ. ಜಿಲ್ಲೆಗೆ 6ನೇ ಸ್ಥಾನ 

12:55 AM Apr 15, 2022 | Team Udayavani |

ಮಂಗಳೂರು/ಉಡುಪಿ: ರಾಜ್ಯಾದ್ಯಂತ ನಡೆಯುತ್ತಿರುವ 12ರಿಂದ 14 ವರ್ಷದೊಳಗಿನ ಮಕ್ಕಳ ಲಸಿಕೆ ಅಭಿಯಾನದಲ್ಲಿ ಕರಾವಳಿಯ ಉಭಯ ಜಿಲ್ಲೆಗಳು ರಾಜ್ಯದಲ್ಲಿಯೇ ಉತ್ತಮ ಪ್ರಗತಿ ಸಾಧಿಸುತ್ತಿವೆ. ಉಡುಪಿ ಜಿಲ್ಲೆ ಮೂರನೇ ಸ್ಥಾನ ಮತ್ತು ದಕ್ಷಿಣ ಕನ್ನಡ 6ನೇ ಸ್ಥಾನ ಪಡೆದುಕೊಂಡಿವೆ.

Advertisement

ಆರೋಗ್ಯ ಇಲಾಖೆಯ ಗುರಿಯ ಪ್ರಕಾರ ಉಡುಪಿ ಜಿಲ್ಲೆಯಲ್ಲಿ 12ರಿಂದ 14 ವರ್ಷದೊಳಗಿನ 30,935 ಮಂದಿ ಗುರಿ ಇರಿಸಿಕೊಂಡಿದ್ದು, 28,426 ಮಂದಿಗೆ ಲಸಿಕೆ ನೀಡಲಾಗಿದೆ. ದ.ಕ.ದಲ್ಲಿ 60,573 ಮಂದಿಯ ಗುರಿ ಇರಿಸಿಕೊಂಡಿದ್ದು, 50,350 ಮಂದಿಗೆ ಮೊದಲನೇ ಡೋಸ್‌ ನೀಡಲಾಗಿದೆ.

ಅಭಿಯಾನಕ್ಕೆ ಆರೋಗ್ಯ ಇಲಾಖೆಯ ಜತೆ ಶಿಕ್ಷಣ ಇಲಾಖೆ ಕೂಡ ಜತೆ ನೀಡಿದೆ. ಕರಾವಳಿ ಜಿಲ್ಲೆಗಳ ಪೋಷಕರು ಮಕ್ಕಳಿಗೆ ಲಸಿಕೆ ನೀಡಲು ಹಿಂಜರಿಯದಿರುವುದೇ ಅಭಿಯಾನದ ಪ್ರಗತಿಗೆ ಪ್ರಮುಖ ಕಾರಣ.

12ರಿಂದ 14ರ ವಯೋಮಾನದವರಿಗೆ ಕೊರ್ಬೆವ್ಯಾಕ್ಸ್‌ ಲಸಿಕೆಯನ್ನು ಎರಡು ಡೋಸ್‌ಗಳಲ್ಲಿ 28 ದಿನಗಳ ಅಂತರದಲ್ಲಿ ನೀಡಲಾಗುತ್ತಿದೆ.

2010 ಹಾಗೂ ಅದಕ್ಕೂ ಮುನ್ನ ಜನಿಸಿರುವವರು ಅಂದರೆ 12 ವರ್ಷ ಪೂರ್ಣಗೊಂಡ ಮಕ್ಕಳು “ಕೋವಿನ್‌’ನಲ್ಲಿ ನೋಂದಣಿ ಮಾಡಿಕೊಳ್ಳಲು ಅರ್ಹರಾಗಿದ್ದಾರೆ. ನೋಂದಣಿ ಆಧಾರದಲ್ಲಿ ಲಸಿಕೆ ನೀಡುವ ದಿನಾಂಕ ಹಾಗೂ ಸಮಯ ನಿಗದಿಯಾಗುತ್ತದೆ. ಲಸಿಕೆ ಪಡೆಯುವ ದಿನಾಂಕಕ್ಕೆ ಸರಿಯಾಗಿ 12 ವರ್ಷ ತುಂಬಿರುವುದು ಕಡ್ಡಾಯ.

Advertisement

ಗುರಿ ಮೀರಿ ಸಾಧನೆ :

ದ.ಕ.ದಲ್ಲಿ ಈಗಾಗಲೇ 12 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದ್ದು, ಮುಂಚೂಣಿ ಕಾರ್ಯಕರ್ತರು, 15ರಿಂದ 17 ವರ್ಷದೊಳಗಿನ ಮಂದಿ, 45ರಿಂದ 60 ವರ್ಷದೊಳಗಿನವರಲ್ಲಿ ಶೇ. 100 ಮತ್ತು ಅದಕ್ಕಿಂತ ಮಿಕ್ಕಿ ಸಾಧನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಶೇ. 100ರಷ್ಟು ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆದುಕೊಂಡರೆ, ಶೇ. 119.65ರಷ್ಟು ಮಂದಿ 15ರಿಂದ 17 ವರ್ಷದೊಳಗಿನವರು ಪಡೆದುಕೊಂಡಿದ್ದಾರೆ. ಅದೇ ರೀತಿ ಶೇ. 105.77ರಷ್ಟು ಮಂದಿ 45ರಿಂದ 60 ವರ್ಷದೊಳಗಿನವರು ಪಡೆದಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಮಂಗಳವಾರ 343 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಇದುವರೆಗೆ 29,339 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.

ಮೊದಲ ಆರು ಸ್ಥಾನ:

ಪ್ರಥಮ ವಿಜಯಪುರ (ಶೇ. 103)

ದ್ವಿತೀಯ             ಬೀದರ್‌ (ಶೇ. 92)

ತೃತೀಯ              ಉಡುಪಿ (ಶೇ. 92)

ಚತುರ್ಥ             ಹಾಸನ (ಶೇ. 84)

ಐದನೇ ಗದಗ (ಶೇ. 84)

ಆರನೇ  ದಕ್ಷಿಣ ಕನ್ನಡ (ಶೇ. 83)

ದ.ಕ. ಜಿಲ್ಲೆಯಲ್ಲಿ ಲಸಿಕೆ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. 12ರಿಂದ 14 ವರ್ಷದೊಳಗಿನ ಮಕ್ಕಳ ಲಸಿಕೆ ಅಭಿಯಾನದಲ್ಲಿ ಜಿಲ್ಲೆಯು ರಾಜ್ಯದಲ್ಲಿ ಆರನೇ ಸ್ಥಾನದಲ್ಲಿದೆ. ಇನ್ನೂ ಬಾಕಿ ಇರುವ ಅರ್ಹರು ಲಸಿಕೆ ಪಡೆಯಿರಿ.ಡಾ| ಕಿಶೋರ್‌ ಕುಮಾರ್‌, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

ಲಸಿಕೆ ನೀಡಿಕೆಯಲ್ಲಿ ಉಡುಪಿ ಜಿಲ್ಲೆ 3ನೇ ಸ್ಥಾನ ಪಡೆದುಕೊಂಡಿದೆ. ನಿರಂತರ ಜಾಗೃತಿಯ ಫ‌ಲ ಇದು. ಅರ್ಹರು ಲಸಿಕೆ ಪಡೆಯಲು ಮುಂದೆ ಬರಬೇಕಿದೆ.ಡಾ| ನಾಗಭೂಷಣ್‌ ಉಡುಪ, ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ

 

Advertisement

Udayavani is now on Telegram. Click here to join our channel and stay updated with the latest news.

Next