Advertisement

ಲಸಿಕೆ ಪಡೆದವರಿಗೆ ವಿನಾಯಿತಿ

01:01 PM Jul 25, 2021 | Team Udayavani |

ಮುಂಬಯಿ: ಎರಡು ಡೋಸ್‌ ಲಸಿಕೆ ಹಾಕಿಸಿಕೊಂಡವರಿಗೆ ಸರಕಾರದ ಕೊರೊನಾ ನಿರ್ಬಂಧಗಳಿಂದ ವಿನಾಯಿತಿ ನೀಡಲು ಮಹಾರಾಷ್ಟ್ರ ಸರಕಾರ ಚಿಂತನೆ ನಡೆಸುತ್ತಿದೆ ಎಂದು ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಶನಿವಾರ ಹೇಳಿ¨ªಾರೆ.

Advertisement

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಸಂಜೆ 4 ಗಂಟೆಯ ವರೆಗೆ ಇರುವ ಅಂಗಡಿ ಮತ್ತು ರೆಸ್ಟೋರೆಂಟ್‌ಗಳ ಸಮಯವನ್ನು 7 ಗಂಟೆ ವರೆಗೆ ವಿಸ್ತರಿಸಲು ಸರಕಾರ ಮುಂದಾಗಿದೆ.

ವಾರಾಂತ್ಯದಲ್ಲಿ ನಿಯಮ ಸಡಿಳಿಕೆ ಮಾಡುವ ನಿರ್ಧಾರ ಮುಂದಿನ ವಾರ ನಡೆಯಲಿದೆ ಎಂದು ಅವರು ಹೇಳಿದರು. ಎರಡೂ ಪ್ರಮಾಣದ ಕೋವಿಡ್‌ ಲಸಿಕೆ ಪಡೆದ ಜನರಿಗೆ ವಿಶ್ರಾಂತಿ ನೀಡುವ ಬಗ್ಗೆ ರಾಜ್ಯವು ಯೋಚಿಸುತ್ತಿದೆ. ಈ ಯೋಜನೆಯಿಂದ ಎಲ್ಲರೂ ಲಸಿಕೆ ಪಡೆಯಲು ಪ್ರೇರೇಪಿತರಾಗುತ್ತಾರೆ. ಈ ಕುರಿತಂತೆ ಅಂತಿಮ ನಿರ್ಧಾರ  ಸಿಎಂ ತೆಗೆದುಕೊಳ್ಳುತ್ತಾರೆ ಎಂದವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next