Advertisement

ಚಾಮರಾಜನಗರ ಪಟ್ಟಣ ಪಂಚಾಯತ್ ನ ನೂತನ ಸದಸ್ಯ ಕೋವಿಡ್ ಸೋಂಕಿನಿಂದ ಸಾವು

07:23 PM Sep 21, 2020 | sudhir |

ಹನೂರು(ಚಾಮರಾಜನಗರ) : ಪಟ್ಟಣ ಪಂಚಾಯಿತಿಯ 2ನೇ ವಾರ್ಡಿನ ನೂತನ ಸದಸ್ಯ ನಾಗರಾಜು ಅವರು ಕೋವಿಡ್-19ನಿಂದಾಗಿ ಸಾವನ್ನಪ್ಪಿದ್ದಾರೆ.

Advertisement

ಮೃತ ನಾಗರಾಜು ಅವರು 2019ರಲ್ಲಿ ಜರುಗಿದ ಪಟ್ಟಣ ಪಂಚಾಯಿತಿ 2ನೇ ವಾರ್ಡಿನಿಂದ ಸ್ಫರ್ಧಿಸಿ ಗೆಲುವು ಸಾಧಿಸಿದ್ದರು. ಅಲ್ಲದೆ ಕಳೆದ ಅವಧಿಯಲ್ಲಿ ಮೈಸೂರು –ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು ಸೆ.12 ರಂದು ಅನಾರೋಗ್ಯದ ಹಿನ್ನೆಲೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆ.

ಮೃತರು ಪತ್ನಿ, ಮೂವರು ಪುತ್ರಿಯರು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಕೋವಿಡ್-19 ಶಿಷ್ಟಾಚಾರದಂತೆ ಅಜ್ಜೀಪುರ ರಸ್ತೆಯ ಅವರ ಜಮೀನಿನಲ್ಲಿ ಸಂಜೆ 5 ಗಂಟೆಯಲ್ಲಿ ನೆರವೇರಿತು.

ಗಣ್ಯರ ಸಂತಾಪ: ಪ.ಪಂ ಸದಸ್ಯ ನಾಗರಾಜು ಅವರ ಮರಣಕ್ಕೆ ಶಾಸಕ ನರೇಂದ್ರ ರಾಜೂಗೌಡ, ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದತ್ತೇಶ್‍ಕುಮಾರ್, ಪ.ಪಂ ಸದಸ್ಯರು, ಮಾಜಿ ಸದಸ್ಯರು, ಸ್ಥಳೀಯ ಮುಖಂಡರು ಮತ್ತು ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next