Advertisement

ಕೇರಳದಿಂದ ಬರುವವರಿಗೆ ಕೋವಿಡ್ ವರದಿ ಕಡ್ಡಾಯ

10:50 PM Jul 01, 2021 | Team Udayavani |

ಬೆಂಗಳೂರು: ಕೇರಳದ ಹಲವು ಜಿಲ್ಲೆಗಳಲ್ಲಿ  ಡೆಲ್ಟಾ ಪ್ಲಸ್‌ ವೈರಾಣು ಪತ್ತೆಯಾಗಿರುವ ಹಿನ್ನೆಲೆ ಯಲ್ಲಿ ರಾಜ್ಯಕ್ಕೆ ಆಗಮಿಸುವವರಿಗೆ ಸೋಂಕು ಪರೀಕ್ಷೆ ಕಡ್ಡಾಯಗೊಳಿಸಿದೆ. ಆದರೆ ಎರಡು ಡೋಸ್‌ ಲಸಿಕೆ ಪಡೆದವರಿಗೆ ಪರೀಕ್ಷೆ ವರದಿಯಿಂದ ವಿನಾಯಿತಿ ನೀಡಲಾಗಿದೆ.

Advertisement

ಕೇರಳದಿಂದ ವಿಮಾನ, ರೈಲು, ಬಸ್‌, ಖಾಸಗಿ ವಾಹನಗಳಲ್ಲಿ ರಾಜ್ಯಕ್ಕೆ ಆಗಮಿಸುವರು 72 ಗಂಟೆಯೊಳಗೆ ನಡೆಸಿರುವ ಕೊರೊನಾ  ನೆಗೆಟಿವ್‌ ವರದಿಯನ್ನು ಹೊಂದಿರಬೇಕು. ಗಡಿ ಜಿಲ್ಲೆಗಳಾದ ಮೈಸೂರು, ಚಾಮರಾಜ ನಗರ, ಕೊಡಗು, ದಕ್ಷಿಣ ಕನ್ನಡದಲ್ಲಿ ಹೆಚ್ಚುವರಿ  ಸಿಬಂದಿ ನಿಯೋಜಿಸಿ ತಪಾಸಣೆಗೆ ಒಳಪಡಿಸಬೇಕು. ವಿಮಾನ ಯಾನ ಸಂಸ್ಥೆಯು ನೆಗೆಟಿವ್‌ ವರದಿ ಇದ್ದರೆ ಮಾತ್ರ ಬೋರ್ಡಿಂಗ್‌ ಪಾಸ್‌ ವಿತರಿಸಬೇಕು. ರೈಲು ನಿಲ್ದಾಣ ದಲ್ಲಿ ಕಡ್ಡಾಯವಾಗಿ  ತಪಾಸಣೆ  ಮಾಡ ಬೇಕು.  ಕೇರಳದಿಂದ ಬರುವವರು ಪ್ರತಿ 15 ದಿನಗಳಿಗೊಮ್ಮೆ  ಪರೀಕ್ಷೆಗೆ ಒಳಗಾಗಿ ನೆಗೆಟಿವ್‌ ವರದಿಯನ್ನು ಹೊಂದಿರ ಬೇಕು ಎಂದು ತಿಳಿಸಲಾಗಿದೆ.

ವಿನಾಯಿತಿ : ಕೊರೊನಾ ಲಸಿಕೆಯ 2 ಡೋಸ್‌ ಪಡೆದುಕೊಂಡವರು, ವೈದ್ಯಾಧಿಕಾರಿಗಳು, ಎರಡು ವರ್ಷದೊಳಗಿನ ಮಕ್ಕಳು, ವೈದ್ಯಕೀಯ ಚಿಕಿತ್ಸೆ, ಸಂಬಂಧಿಗಳ ಮರಣದಂತಹ ತುರ್ತು ಸಂದರ್ಭದಲ್ಲಿ ರಾಜ್ಯಕ್ಕೆ ಬರುವವರಿಗೂ ನೆಗೆಟಿವ್‌ ವರದಿಯಿಂದ   ವಿನಾಯಿತಿ ಯಿದೆ.  ಆದರೆ ಅವರು  ಕೊರೊನಾ ಸೋಂಕು ಪರೀಕ್ಷೆಗೆ ಮಾದರಿ,  ಆಧಾರ್‌ ನಂಬರ್‌ ಹಾಗೂ ವಿಳಾಸ  ನೀಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next