Advertisement

ಕೇರ್ ಸೆಂಟರ್ ಗೆ ಕಳುಹಿಸಿದರೆ ವಿಷ ಕುಡಿಯುವುದಾಗಿ ಬೆದರಿಸಿದ ಕೋವಿಡ್ ಸೋಂಕಿತ

08:24 PM Jun 15, 2021 | Team Udayavani |

ದಾವಣಗೆರೆ: ಕೋವಿಡ್ ಕೇರ್ ಸೆಂಟರ್‌ಗೆ ತೆರಳಲು ನಿರಾಕರಿಸಿದ ಕೊರೊನಾ ಸೋಂಕಿತನೋರ್ವ ವಿಷ ಕುಡಿದು ಸಾವನ್ನಪ್ಪುವುದಾಗಿ ಬೆದರಿಸಿದ ಘಟನೆ ಹರಿಹರ ತಾಲೂಕಿನ ಭಾನುವಳ್ಳಿಯಲ್ಲಿ ಮಂಗಳವಾರ (ಜೂನ್ 15) ನಡೆದಿದೆ.

Advertisement

ಭಾನುವಳ್ಳಿ ಗ್ರಾಮದ ಒಂದೇ ಮನೆಯ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಮಗ ಮತ್ತು ಸೊಸೆಯನ್ನ ಬೇರೆ ಕಡೆಗೆ ಕಳಿಸಿದ್ದ ವ್ಯಕ್ತಿಯನ್ನ ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಕೇರ್ ಸೆಂಟರ್‌ಗೆ ಕರೆದೊಯ್ಯಲು ತೆರಳಿದ್ದ ಸಂದರ್ಭದಲ್ಲಿ ಆತ ಕೇರ್ ಸೆಂಟರ್‌ಗೆ ದಾಖಲಾಗಲು ನಿರಾಕರಿಸಿದ್ದಾನೆ.

ಪಾಸಿಟಿವ್ ಬಂದ ಆತನಿಗೆ ಕೇರ್ ಸೆಂಟರ್‌ಗೆ ದಾಖಲಾಗುವಂತೆ ಎಷ್ಟೇ ಮನವೊಲಿಸಿದರೂ ಬಿಲ್‌ಕುಲ್ ಒಪ್ಪದ ಆತ ನನಗೆ ಏನೂ ಆಗಿಲ್ಲ. ಆರೋಗ್ಯವಾಗಿಯೇ ಇದ್ದೇನೆ ಎಂದು ವಾದಿಸಿದ್ದಾನೆ. ಕೊನೆಗೆ ಮನೆಯ ಒಳಗನಿಂದ ವಿಷದ ಬಾಟಲಿ ತಂದು ಕುಡಿದು ಸಾಯುವುದಾಗಿ ಹೇಳಿದ್ದಾನೆ. ಅಧಿಕಾರಿಗಳ ತಂಡ ಸಮಾಧಾನ ಪಡಿಸಿ, ವಿಷದ ಬಾಟಲಿ ಕಿತ್ತ್ತುಕೊಂಡಿದ್ದಾರೆ. ಎಷ್ಟೇ ಮನವೊಲಿಕೆ ಮಾಡಿದರೂ ಆತ ಕೇರ್ ಸೆಂಟರ್‌ಗೆ ತೆರಳಲಿಕ್ಕೆ ಬಿಲ್‌ಕುಲ್ ಒಪ್ಪಲಿಲ್ಲ ಹಾಗಾಗಿ ಅಽಕಾರಿಗಳ ತಂಡ ಬರಿಗೈಯಲ್ಲಿ ವಾಪಾಸ್ ಆಗಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next