Advertisement

ಜನ ಸೇರುವ ಕಾರ್ಯಕ್ರಮ ಸದ್ಯಕ್ಕೆ ಬೇಡ : ಕೇಂದ್ರ ಆರೋಗ್ಯ ಸಚಿವಾಲಯದ ಮನವಿ

12:25 AM Jun 09, 2021 | Team Udayavani |

ನವದೆಹಲಿ: ದೇಶದಲ್ಲಿ ಕೊರೊನಾ ಪರಿಸ್ಥಿತಿ ಇಳಿಮುಖವಾಗುತ್ತಿದ್ದರೂ, ಮುಂದಿನ ಕೆಲವು ತಿಂಗಳ ವರೆಗೆ ದೊಡ್ಡ ಪ್ರಮಾಣದಲ್ಲಿ ಜನರು ಸೇರುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು ಬೇಡ. ಹೀಗೆಂದು ಕೇಂದ್ರ ಆರೋಗ್ಯ ಖಾತೆ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌ ಮನವಿ ಮಾಡಿದ್ದಾರೆ.

Advertisement

ಮಂಗಳವಾರ ನವದೆಹಲಿಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಸೋಂಕು ತಡೆಯಲು ಪ್ರತಿಬಂಧಕ ನಿಯಮಗಳನ್ನು ಅನುಸರಿಸಲೇಬೇಕಾಗಿದೆ ಎಂದಿದ್ದಾರೆ. ಮೇ 7ರ ಬಳಿಕ ದೇಶದಲ್ಲಿ ಸದ್ಯ ಶೇ.70ರಷ್ಟು ಸೋಂಕು ಪ್ರಕರಣಗಳು ತಗ್ಗಿವೆ. ಜತೆಗೆ ದಿನದಿಂದ ದಿನಕ್ಕೆ ದಿನವಹಿ ಸೋಂಕು ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಹೇಳಿದ್ದಾರೆ. ಅಗರ್ವಾಲ್‌ ಹೇಳಿದ ಪ್ರಕಾರ ಪ್ರತಿ ಮಿಲಿಯ ಜನಸಂಖ್ಯೆಗೆ 20,822 ಸೋಂಕು ಪ್ರಕರಣ ಮತ್ತು 252 ಮಂದಿ ಅಸುನೀಗಿದ್ದಾರೆ. ಜಗತ್ತಿನ ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಇದು ಅತ್ಯಂತ ಕನಿಷ್ಠ ಪ್ರಮಾಣದ್ದು ಎಂದು ಅಗರ್ವಾಲ್‌ ಹೇಳಿದ್ದಾರೆ.

ಇದನ್ನೂ ಓದಿ :ಚುನಾವಣಾ ಸುಧಾರಣೆ ಬಾಕಿ: ಸರ್ಕಾರಕ್ಕೆ ಸಿಇಸಿ ಪತ್ರ

ಇತರ ಸಮಸ್ಯೆಗಳಿಂದ: ದೇಶದಲ್ಲಿ ಸದ್ಯಕ್ಕೆ 3ನೇ ಅಲೆ ಉಂಟಾಗಿದೆ ಎಂದು ಹೇಳಲು ಸಾಧ್ಯವಿಲ್ಲ. 2ನೇ ಅಲೆಯಲ್ಲಿ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದರೂ ಕೂಡ ಇತರ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಶೇ.60-70 ಮಂದಿ ಮಕ್ಕಳು ಚಿಕಿತ್ಸೆಗಾಗಿ ದಾಖಲಾಗಿದ್ದಾರೆ ಎಂದು ನವದೆಹಲಿಯ ಏಮ್ಸ್‌ ನಿರ್ದೇಶಕ ಡಾ.ರಣದೀಪ್‌ ಗುಲೇರಿಯಾ ಹೇಳಿದ್ದಾರೆ. ಜಗತ್ತಿನ ಮತ್ತು ನಮ್ಮ ದೇಶದ ಮಾಹಿತಿ ವಿಶ್ಲೇಷಿಸುವುದಿದ್ದರೆ ಹಳೆಯ ಅಥವಾ ರೂಪಾಂತರಿ ಸೋಂಕು ಮಕ್ಕಳಿಗೆ ಬಾಧಿಸಿದ್ದು ಖಚಿತವಾಗಿಲ್ಲ ಎಂದುಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next