Advertisement

ತಾಲೂಕಿಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯ ನಿರೀಕ್ಷೆ

06:37 PM Jun 04, 2021 | Team Udayavani |

ಮಂಡ್ಯ: ನಾಗಮಂಗಲ ತಾಲೂಕಿನಲ್ಲಿ ವಲಸಿಗರಸಂಖ್ಯೆ ಹೆಚ್ಚಾಗಿದ್ದು, ಇದರಿಂದಕೊರೊನಾ ಸೋಂಕಿನಎರಡನೇ ಅಲೆಯೂ ವೇಗವಾಗಿ ಹರಡಿತು.ಸೋಂಕನ್ನು ನಿವಾರಿಸಲು ಶಾಸಕಕೆ.ಸುರೇಶ್‌ಗೌಡ ಹಾಗೂ ತಾಲೂಕು ಆಡಳಿತಕ್ಕೆ ಸವಾಲಾಗಿತ್ತು.

Advertisement

ವಲಸಿಗರನ್ನು ಪತ್ತೆ ಹಚ್ಚಿ ಅವರನ್ನುಪರೀಕ್ಷೆಗೊಳಪಡಿಸಿ, ಸೂಕ್ತ ಚಿಕಿತ್ಸೆ ನೀಡಿ ತಾಲೂಕಿನಲ್ಲಿಹರಡಿದ್ದ ಸೋಂಕಿನ ಚೈನ್‌ಲಿಂಕ್‌ಕತ್ತರಿಸಲು ಎಲ್ಲ ರೀತಿಯ ಕ್ರಮಗಳನ್ನುಕೈಗೊಳ್ಳಲಾಗಿದೆ.ಸೋಂಕು ಕಂಡು ಬರುವ ಗ್ರಾಮಗಳನ್ನುಸೀಲ್‌ಡೌನ್‌ ಮಾಡಿ, ಸೋಂಕಿತರನ್ನು ಪತ್ತೆ ಹಚ್ಚಿ ಅವರನ್ನುಕ್ವಾರಂಟೈನ್‌ಕೇಂದ್ರಗಳಿಗೆ ಕರೆತಂದು ಉತ್ತಮ ಚಿಕಿತ್ಸೆ, ಸೌಲಭ್ಯ ಕಲ್ಪಿಸುವ ಮೂಲಕಸೋಂಕು ನಿಯಂತ್ರಣಕ್ಕೆಕ್ರಮ ವಹಿಸಲಾಗುತ್ತಿದೆ.

ಬಡವರು, ನಿರ್ಗತಿಕರಿಗೆ ಆಹಾರ ಹಾಗೂ ಔಷಧಕಿಟ್‌ಗಳನ್ನು ವಿತರಿಸುವ ಮೂಲಕ ನೆರವು ನೀಡುವುದಲ್ಲದೆ,ಖುದ್ದಾಗಿ ಸೋಂಕಿತರಿರುವಕ್ವಾರಂಟೈನ್‌ಕೇಂದ್ರಗಳು ಹಾಗೂ ಆಸ್ಪತ್ರೆಗಳಿಗೆ ಭೇಟಿ ನೀಡಿ ಆರೋಗ್ಯವಿಚಾರಿಸುವ ಮೂಲಕ ಸೋಂಕು ನಿಯಂತ್ರಿಸಲುಪ್ರಯತ್ನ ಮಾಡಲಾಗುತ್ತಿದೆ. ಸದ್ಯ ನಾಗಮಂಗಲತಾಲೂಕು ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ 6ನೇ ಸ್ಥಾನದಲ್ಲಿದ್ದರೆ, ಸಕ್ರಿಯ ಪ್ರಕರಣಗಳಲ್ಲಿ ಕೊನೇ ಸ್ಥಾನಪಡೆದಿದೆ. ಈ ಬಗ್ಗೆ ಶಾಸಕ ಕೆ.ಸುರೇಶ್‌ಗೌಡ ಅವರುಉದಯವಾಣಿಯೊಂದಿಗೆ ಸೋಂಕು ನಿಯಂತ್ರಣಕ್ಕೆಸಂಬಂಧಿಸಿ ಕುರಿತಂತೆ ತಮ್ಮ ಅಭಿಪ್ರಾಯಹಂಚಿಕೊಂಡಿದ್ದಾರೆ.

ತಾಲೂಕಿನ ವಲಸಿಗರ ಪತ್ತೆಗೆಯಾವ ಕ್ರಮ ಕೈಗೊಂಡಿದ್ದೀರಾ?

ತಾಲೂಕಿನಲ್ಲಿ ಹೆಚ್ಚು ವಲಸಿಗರು ಬಂದಿದ್ದಾರೆ.ಮೊದಲ ಅಲೆಯಲ್ಲಿ ಯಾವುದೇ ಸೋಂಕುಕಂಡುಬಂದಿರಲಿಲ್ಲ. ನಂತರದ ದಿನಗಳಲ್ಲಿ ಬಾಂಬೆಯಿಂದ ಬಂದಿದ್ದ ವಲಸಿಗರೊಬ್ಬರಲ್ಲಿ ಕಾಣಿಸಿಕೊಂಡಿತ್ತು.ಇದನ್ನು ನಿಯಂತ್ರಿಸಲಾಗಿತ್ತು. ಆದರೆ ಎರಡನೇಅಲೆಯಲ್ಲಿ ಇದು ಹೆಚ್ಚಳವಾಗಿತ್ತು. ಬೆಂಗಳೂರಿನಲ್ಲಿಅತಿ ಹೆಚ್ಚು ಮಂದಿ ತಾಲೂಕಿನವರು ಇದ್ದು,ಬೆಂಗಳೂರಿನಲ್ಲಿ ಸೋಂಕುಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಲ್ಲರೂ ಗ್ರಾಮಗಳಿಗೆ ಬಂದಿದ್ದರಿಂದಸೋಂಕು ಹೆಚ್ಚಾಗಿ ಹರಡಿತ್ತು. ಇವರನ್ನು ಪತ್ತೆ ಹಚ್ಚಲುಗ್ರಾಪಂ ಮಟ್ಟದಲ್ಲಿ ಅಧಿಕಾರಿಗಳು, ಅಂಗನವಾಡಿ,ಆಶಾಕಾರ್ಯಕರ್ತೆಯರು ಪತ್ತೆ ಹಚ್ಚಿ ಎಲ್ಲರನ್ನುಪರೀಕ್ಷೆಗೊಳಪಡಿಸಿ, ಸೋಂಕಿತರನ್ನುಕ್ವಾರಂಟೈನ್‌ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

ಸೋಂಕು ನಿಯಂತ್ರಣಕ್ಕೆ ಯಾವ ರೀತಿ ಕ್ರಮ ತೆಗೆದುಕೊಂಡಿದ್ದೀರಾ?

ತಾಲೂಕಿನಲ್ಲಿ ಸೋಂಕು ನಿಯಂತ್ರಣಕ್ಕೆ ಅಗತ್ಯಕ್ರಮಗಳನ್ನುಕೈಗೊಳ್ಳಲಾಗಿದೆ. ಸೋಂಕುಕಂಡುಬಂದವರನ್ನು ಕೂಡಲೇಕ್ವಾರಂಟೈನ್‌ಕೇಂದ್ರಗಳಿಗೆಕರೆತಂದು ಅವರಿಗೆ ಉತ್ತಮ ಚಿಕಿತ್ಸೆ, ಗುಣಮಟ್ಟದಬಿಸಿಯೂಟ, ಶೌಚಾಲಯ, ಶುಚಿತ್ವ, ಬಿಸಿನೀರು,ಹೊದಿಕೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನುಕಲ್ಪಿಸಲಾಗಿದೆ. ಖುದ್ದಾಗಿ ಅವರನ್ನು ಭೇಟಿ ಮಾಡಿಸಮಸ್ಯೆ ಆಲಿಸಿ ಬಗೆಹರಿಸುವ ಮೂಲಕ ಸೋಂಕುನಿಯಂತ್ರಣಕ್ಕೆಕ್ರಮ ವಹಿಸಲಾಗಿದೆ.

ತಾಲೂಕಿನಲ್ಲಿ ಸೋಂಕು ನಿಯಂತ್ರಣಕ್ಕೆ ಸರ್ಕಾರದ ಸೌಲಭ್ಯ ಹೇಗಿದೆ?

ಸರ್ಕಾರದ ಮಟ್ಟದಲ್ಲಿ ತಾಲೂಕಿಗೆ ವಿಶೇಷ ಸೌಲಭ್ಯಗಳುಕೊಟ್ಟಿಲ್ಲ. ವಿರೋಧ ಪಕ್ಷದವರು ಎಂದು ನಿರ್ಲಕ್ಷವಹಿಸಿದ್ದಾರೆ. ಸ್ಥಳೀವಾಗಿ ತಾಲೂಕು ಆಡಳಿತಹಾಗೂ ದಾನಿಗಳ ಸಹಾಯದಿಂದ ಅಗತ್ಯ ಸೌಲಭ್ಯನೀಡಲಾಗುತ್ತಿದೆ. ಸೋಂಕು ನಿಯಂತ್ರಿಸಲು ದೂರದೃಷ್ಟಿಯಕ್ರಮಕೈಗೊಳ್ಳಬೇಕಿತ್ತು. ಹೆಚ್ಚು ಹೆಚ್ಚುಪರೀಕ್ಷೆಗಳು ನಡೆಯಬೇಕು. ಆ ನಿಟ್ಟಿನಲ್ಲಿ ಸರ್ಕಾರಪರೀûಾಕಿಟ್‌ಗಳನ್ನು ಒದಗಿಸಬೇಕು. ಪರೀಕ್ಷೆ ಹೆಚುc ‌ನಡೆದಂತೆ ಸೋಂಕು ನಿಯಂತ್ರಿಸಲು ಸಾಧ್ಯವಾಗಲಿದೆ.ಸೋಂಕಿತರ ಪ್ರಥಮ ಸಂಪರ್ಕದ 30 ಮಂದಿ ಹಾಗೂದ್ವಿತೀಯ ಸಂಪರ್ಕದ20 ಮಂದಿಗೆ ಪರೀಕ್ಷೆ ಅಗತ್ಯವಾಗಿನಡೆಯಬೇಕಿದೆ. ಹೋಂ ಕ್ವಾರಂಟೈನ್‌ ವ್ಯವಸ್ಥೆ ಸರಿಯಲ್ಲ. ರ್ಯಾಪಿಡ್‌, ಆಂಟಿಜೆನ್‌ ಟೆಸ್ಟ್‌ಗಳಲ್ಲಿ ಸರಿಯಾದವರದಿ ಬರುವುದಿಲ. ಆರ್‌ಟಿಪಿಸಿಆರ್‌ನಲ್ಲೂ ನೆಗೆಟಿವ್‌ ವರದಿ ಬಂ¨ರೂ‌ ಸಿಟಿ ಸ್ಕಾನ್‌ನಲ್ಲಿ ವೈರಸ್‌ಗಂಭೀರವಾಗಿ ಹರಡಿರುತ್ತೆ. ಆದರೆ ಸರ್ಕಾರ ಸೋಂಕಿನಸಂಖ್ಯೆಕಡಿಮೆ ಮಾಡುವ ಬದಲು ಜನರ ಜೀವಉಳಿಸಲು ಮುಂದಾಗಬೇಕು.

ಸೋಂಕುನಿಯಂತ್ರಣಕ್ಕೆವೈಯಕ್ತಿಕ ಕೊಡುಗೆಏನು?

ನಮ್ಮ ತಾಲೂಕಿನಲ್ಲಿ ಹೆಚ್ಚು ಬಡವರಿದ್ದಾರೆ. ಅವರುಸಿಟಿ ಸ್ಕಾ Âನ್‌ ಮಾಡಿಸಿಕೊಳ್ಳಲು ಆರ್ಥಿಕವಾಗಿ ಸಬಲರಾಗಿಲ್ಲ. ಅಂಥವರಿಗೆ ಸಹಾಯ ಮಾಡಲಾಗುತ್ತಿದೆ.ಸೋಂಕಿತರಿಗೆ ಬೇಕಾದ ಅಗತ್ಯ ಆಕ್ಸಿಜನ್‌, ಬೆಡ್‌ ವ್ಯವಸ್ಥೆಮಾಡಿಕೊಡಲಾಗುತ್ತಿದೆ. ಅಗತ್ಯವಾದ ಔಷಧಗಳನ್ನುವೈಯಕ್ತಿಕವಾಗಿ ವಿತರಿಸಲಾಗುತ್ತಿದೆ. ಸೀಲ್‌ಡೌನ್‌ ಆದಗ್ರಾಮಗಳಿಗೆ ಆಹಾರ ಕಿಟ್‌ಗಳನ್ನು ತಾಲೂಕು ಆಡಳಿತಹಾಗೂ ಸ್ಥಳೀಯ ಆಡಳಿತಗಳ ಜತೆ ದಾನಿಗಳ ಸಹಕಾರದಿಂದ ನೀಡಲಾಗುತ್ತಿದೆ. ಸೋಂಕಿತರನ್ನುಕರೆತರಲುಹಾಗೂ ಕರೆದುಕೊಂಡು ಹೋಗಲು ಈಗಾಗಲೇ ನಾಲ್ಕುಆಂಬ್ಯುಲೆನ್ಸ್‌ಗಳಿವೆ. ಇನ್ನೂ ನಾಲ್ಕು ಆಂಬ್ಯುಲೆನ್ಸ್‌ಗಳನ್ನುಸರ್ಕಾರ ಬಾಡಿಗೆಗೆ ತೆಗೆದುಕೊಳ್ಳುವಂತೆ ಸೂಚಿಸಿದೆ.ಅದರಂತೆ ವೈಯಕ್ತಿಕವಾಗಿ ಹಲವು ಸಹಾಯಗಳನ್ನುಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next