Advertisement

289 ಮಂದಿಗೆ ಸೋಂಕು

09:42 PM Jun 28, 2021 | Team Udayavani |

ಹಾಸನ: ಜಿಲ್ಲೆಯ ಲ್ಲಿ ಭಾನುವಾರ ಹೊಸದಾಗಿ 289 ಮಂದಿಗೆಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿನಿಂದ ನಾಲ್ವರುಸಾವಿಗೀಡಾಗಿದ್ದಾರೆ. ಮೃತಪಟ್ಟವರಲ್ಲಿ ಅರಸೀಕೆರೆ, ಬೇಲೂರು, ಹಾಸನ ಮತ್ತು ಹೊಳೆನರಸೀಪುರ ತಾಲೂಕಿನ ತಲಾ ಒಬ್ಬರು ಸೇರಿದ್ದಾರೆ.

Advertisement

ಜಿಲ್ಲೆಯಲ್ಲೀಗ ಸೋಂಕಿತರ ಸಂಖ್ಯೆ1,01,175ಕ್ಕೆಏರಿದ್ದು, ಸೋಂಕಿನಿಂದ ಈವರೆಗೆ ಒಟ್ಟು 1,197 ಮಂದಿಮೃತಪಟ್ಟಿದ್ದಾರೆ. ಭಾನುವಾರ367 ಮಂದಿ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ3,810ಕ್ಕೆ ಇಳಿದಿದೆ.

ಭಾನುವಾರ ಸೋಂಕು ದೃಢಪಟ್ಟಿರುವ289ಮಂದಿ ಪೈಕಿ ಅರಕಲಗೂಡು ತಾಲೂಕಿನ62 ಮಂದಿ ಸೇರಿದ್ದರೆ,ಹಾಸನ46, ಸಕಲೇಶಪುರ38, ಹೊಳೆನರಸೀಪುರ31, ಚನ್ನರಾಯಪಟ್ಟಣ37, ಆಲೂರು 25, ಅರಸೀಕೆರೆ 24, ಬೇಲೂರುತಾಲೂಕಿನ22 ಮಂದಿ ಹಾಗೂ ಹೊರ ಜಿಲ್ಲೆಯ ನಾಲ್ವರಿಗೆಸೋಂಕು ದೃಢಪಟ್ಟಿದೆ ಎಂದು ಡಿಎಚ್‌ಒ ಡಾ.ಸತೀಶ್‌ಕುಮಾರ್‌ ತಿಳಿಸಿದ್ದಾರೆ.

ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಭಾನುವಾರ367 ಮಂದಿ ಗುಣಮುಖರಾಗಿದ್ದು, ಇದುವರೆಗೂ ಒಟ್ಟು96,168 ಮಂದಿ ಗುಣಮಖರಾಗಿದ್ದಾರೆ. ಐಸಿಯುನಲ್ಲಿರುವ100 ಮಂದಿ ಸೇರಿ ಒಟ್ಟು 3,810 ಮಂದಿಗೆ ಚಿಕಿತ್ಸೆಮುಂದುವರಿದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next