Advertisement

ಕೊರೊನಾಗೆ ಮೃತಪಟ್ಟ ಕುಟುಂಬಕ್ಕೆ ನಿರಂಜನ್‌ ನೆರವು

06:26 PM Jun 26, 2021 | Team Udayavani |

ಗುಂಡ್ಲುಪೇಟೆ: ತಾಲೂಕಿನ ಬೇಗೂರು ಗ್ರಾಮದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ಕುಟುಂಬಸ್ಥರ ಮನೆಗೆ ಶಾಸಕ ಸಿ.ಎಸ್‌.ನಿರಂಜನ ಕುಮಾರ್‌ ಭೇಟಿ ನೀಡಿ ಸಾಂತ್ವನ ಹೇಳಿದರು.

Advertisement

ಮೃತರ ನಿವಾಸಗಳಿಗೆ ತೆರಳಿ ಸಾಂತ್ವನ ಹೇಳಿದ ಶಾಸಕರು,ಕುಟುಂಬಸ್ಥರಿಗೆ ವೈಯಕ್ತಿಕವಾಗಿ ಧನ ಸಹಾಯ ಮಾಡಿದರು.ಈ ವೇಳೆ ಮಾತನಾಡಿದ ಅವರು, ಕೊರೊನಾದಿಂದತಾಲೂಕಿನಲ್ಲಿ ಹಲವು ಮಂದಿ ಸಾವನ್ನಪಿರುವುದು ನೋವು ತಂದಿದೆ.

ಯಾರು ಧೃತಿಗೆಡುವ ಅವಶ್ಯಕತೆಯಿಲ್ಲ. ನಿಮ್ಮೊಂದಿಗೆನಾವಿದ್ದೇವೆ. ಪ್ರತಿಯೊಬ್ಬರು ಲಸಿಕೆ ಪಡೆಯುವ ಮೂಲಕಕೊರೊನಾ ಬರದಂತೆ ತಡೆಗಟ್ಟಿ ಎಂದು ಮನವಿ ಮಾಡಿದರು.ಈ ವೇಳೆ ಬೇಗೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷಎಚ್‌.ಜಿ.ನಾರಾಯಣಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷರಾಜಶೆಟ್ಟಿ, ಮಾಜಿ ಉಪಾಧ್ಯಕ್ಷ ಪಂ.ನಾಗಶೆಟ್ಟಿ, ಗ್ರಾಪಂ ಸದಸ್ಯಆಟೋಕರಿಯಾ, ಬಿಜೆಪಿ ಮುಖಂಡ ಸೋಮು ಇತರರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next