Advertisement
ಆರ್ ವ್ಯಾಲ್ಯೂ ಯಾವಾಗ 1ಕ್ಕಿಂತ ಕೆಳಕ್ಕೆ ಇಳಿಯುತ್ತದೋ ಆಗ ಸೋಂಕು ಅಂತ್ಯವಾಯಿತು ಎಂದರ್ಥ. ಭಾರತದ ಮಟ್ಟಿಗೆ ನೋಡುವುದಾದರೆ ಡಿಸೆಂಬರ್ 25ರಿಂದ 31ರ ಅವಧಿಯಲ್ಲಿ ಆರ್ ವ್ಯಾಲ್ಯೂ 2.9ರಷ್ಟಿತ್ತು. ಜ.1ರಿಂದ 6ರ ಅವಧಿಯಲ್ಲಿ ಇದು 4ಕ್ಕೇರಿತ್ತು. ಆದರೆ ಜ.7ರಿಂದ 13ರ ಅವಧಿಯಲ್ಲಿ 2.2ಕ್ಕಿಳಿದಿದೆ. ಅಂದರೆ ಸೋಂಕಿನ ವ್ಯಾಪಿಸುವಿಕೆ ಕಡಿಮೆಯಾಗಿದ್ದು, 3ನೇ ಅಲೆಯ ತೀವ್ರತೆ ಇಳಿಮುಖವಾಗಿರುವುದನ್ನು ಇದು ತೋರಿಸಿದೆ ಎಂದು ಐಐಟಿ ಮದ್ರಾಸ್ನ ವಿಶ್ಲೇಷಣ ವರದಿ ಹೇಳಿದೆ.
Related Articles
ಹೊಸದಿಲ್ಲಿ: ಭಾರತಕ್ಕೆ ಕೊರೊನಾ ಅಪ್ಪಳಿಸಿದ ಅನಂತರ ಅಂದರೆ 2020, ಎ.1ರಿಂದ 1,47,492 ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ. ಇನ್ನಿತರ ಕಾರಣಗಳಿಂದ ಪೋಷಕರಿಲ್ಲದ ಮಕ್ಕಳೂ ಈ ಪಟ್ಟಿಯಲ್ಲಿ ಸೇರಿದ್ದಾರೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣ ಆಯೋಗ ಸರ್ವೋಚ್ಚ ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಿದೆ.
Advertisement
ಮಕ್ಕಳ ರಕ್ಷಣೆ ವಿಚಾರದಲ್ಲಿ ಕಳವಳಗೊಂಡು ಸರ್ವೋಚ್ಚ ಪೀಠ ಸ್ವಪ್ರೇರಿತವಾಗಿ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಹಿನ್ನೆಲೆಯಲ್ಲಿ ಎನ್ಸಿಪಿಸಿಆರ್ ಈ ಮಾಹಿತಿ ನೀಡಿದೆ. ತನ್ನ ಬಾಲ ಸ್ವರಾಜ್ ವೆಬ್ಸೈಟ್ನಲ್ಲಿ ಜ.11ರ ವರೆಗೆ ಸಲ್ಲಿಸಲ್ಪಟ್ಟಿರುವ ಮಾಹಿತಿ ಪ್ರಕಾರ, 10,094 ಮಕ್ಕಳು ಅನಾಥರಾಗಿದ್ದಾರೆ. 1,36,910 ಮಕ್ಕಳು ಅಪ್ಪ ಅಮ್ಮನ ಪೈಕಿ ಒಬ್ಬರನ್ನು ಕಳೆದುಕೊಂಡಿದ್ದಾರೆ. 488 ಮಕ್ಕಳು ಪೋಷಕರಿಂದ ತ್ಯಜಿಸಲ್ಪಟ್ಟಿದ್ದಾರೆ ಎಂದು ಎನ್ಸಿಪಿಸಿಆರ್ ಹೇಳಿದೆ.