Advertisement

ಕೆಡಿಎಂಸಿಗೆ ಕೋವಿಡ್‌ ಇನ್ನೋವೇಶನ್‌ ಪ್ರಶಸ್ತಿ

12:52 PM Jun 27, 2021 | Team Udayavani |

ಮುಂಬಯಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್‌ ಸಿಟಿ ಯೋಜನೆಯಡಿ ನಡೆದ ಕೋವಿಡ್‌ ಇನ್ನೋವೇಶನ್‌ ಸ್ಪರ್ಧೆ ಯಲ್ಲಿ ಕಲ್ಯಾಣ್‌-ಡೊಂಬಿವಲಿ ಮಹಾನಗರ ಪಾಲಿಕೆ (ಕೆಡಿಎಂಸಿ)ಯು ಪ್ರಥಮ ಸ್ಥಾನ ಗಳಿಸಿದೆ.

Advertisement

ಕೊರೊನಾ ಅವಧಿಯಲ್ಲಿ ಮಾಡಿದ ಅತ್ಯು ತ್ತಮ ಕಾರ್ಯಗಳಿಗಾಗಿ ಕಲ್ಯಾಣ್‌- ಡೊಂಬಿವಲಿ ಮಹಾ ನಗರ ಪಾಲಿಕೆ ಮತ್ತು ಪ್ರಧಾನಿ ಮೋದಿ ಯವರ ವಾರಣಾಸಿ ಕ್ಷೇತ್ರಕ್ಕೆ ಜಂಟಿ ಯಾಗಿ ಪ್ರಥಮ ಬಹುಮಾನ ನೀಡಲಾ ಗಿದೆ. ಕೇಂದ್ರ ವಸತಿ ಮತ್ತು ನಗರ ವ್ಯವ ಹಾ ರಗಳ ರಾಜ್ಯ ಸಚಿವ ಹದೀìಪ್‌ ಪುರಿ ಅವರ ಅಧ್ಯಕ್ಷತೆ ಯಲ್ಲಿ ವಿವಿಧ ಪ್ರಶಸ್ತಿಗಳನ್ನು ಘೋಷಿ ಸಲಾಯಿತು. ದೇಶಾದ್ಯಂತ 100 ಮಹಾನ‌ಗರ ಪಾಲಿಕೆಗಳು ಪ್ರಶಸ್ತಿ ಗಾಗಿ ಪ್ರಸ್ತಾವನೆ ಗಳನ್ನು ಕೇಂದ್ರ ಸರ ಕಾರಕ್ಕೆ ಸಲ್ಲಿಸಿದ್ದವು. ಇದರಲ್ಲಿ ಕಲ್ಯಾಣ್‌ -ಡೊಂಬಿವಲಿ ಮುನ್ಸಿಪಲ್‌ ಕಾರ್ಪೊರೇಶನ್‌ ಜಾರಿಗೆ ತಂದಿರುವ ಫ್ಯಾಮಿಲಿ ಡಾಕ್ಟರ್‌-ಕೋವಿಡ್‌ ಫೈಟರ್‌ ಸೇರಿದಂತೆ ಖಾಸಗಿ ವೈದ್ಯರ ಕೋವಿಡ್‌ ಪಡೆ ಉಪಕ್ರಮಕ್ಕೆ ಪ್ರಶಸ್ತಿ ಲಭಿಸಿದೆ.

ಮೊದಲ ಸುತ್ತಿನಲ್ಲಿ ಕೆಡಿಎಂಸಿ ಅಗ್ರ 10 ಸ್ಥಾನಗಳನ್ನು ತಲುಪಿತ್ತು. ಅಂತಿಮ ಸುತ್ತಿನಲ್ಲಿ ಮೊದಲ ಬಹುಮಾನವನ್ನು ವಾರಣಾಸಿ ಮತ್ತು ಕಲ್ಯಾಣ್‌ ಡೊಂಬಿವಲಿ ಮಹಾನಗರ ಪಾಲಿಕೆಗೆ ಜಂಟಿಯಾಗಿ ಪಡೆದಿದೆ. ಶೀಘ್ರದಲ್ಲೇ ಹೊಸದಿಲ್ಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಈ ಕುರಿತು ಮಾತನಾಡಿದ ಕಲ್ಯಾಣ್‌-ಡೊಂಬಿವಲಿ ಮಹಾನಗರ ಪಾಲಿಕೆಯ ಆಯುಕ್ತ ಸೂರ್ಯವಂಶಿ ಅವರು, ಈ ಪ್ರಶಸ್ತಿಯು ಐಎಂಎ ವೈದ್ಯರು, ಖಾಸಗಿ ವೈದ್ಯರು, ಪುರಸಭೆಯ ವೈದ್ಯರು, ಆರೋಗ್ಯ ಕಾರ್ಯಕರ್ತರು, ಸಿಬಂದಿ, ಜನರ ಪ್ರತಿನಿಧಿಗಳು, ಎಲ್ಲ ನಾಗರಿಕರಿಗೆ ಸಂದ ಗೌರವವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next