Advertisement

ಕೋವಿಡ್ ಗೆ ಮತ್ತೆ 7 ಸಾವು

04:52 PM Aug 31, 2020 | Suhan S |

ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್ ಆರ್ಭಟ ಮುಂದುವರಿದಿದ್ದು, ರವಿವಾರ ಮತ್ತೆ ಏಳು ಜನರು ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಾವಿನ ಸಂಖ್ಯೆಯು 147ಕ್ಕೆ ಏರಿಕೆಯಾಗಿದೆ.

Advertisement

ಇನ್ನೂ ಇದೇ ದಿನದಂದು 202 ಜನರಿಗೆ ಸೋಂಕು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆಯು 6,453ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಪ್ರತಿ ದಿನವೂ ಕೋವಿಡ್‌ಗೆ ಜನರು ಬಲಿಯಾಗುತ್ತಿದ್ದಾರೆ. ಜಿಲ್ಲಾಡಳಿತ ಯಾವ ರೀತಿ ಚಿಕಿತ್ಸೆಯ ವಿಧಾನ ಅನುಸರಿಸುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಇದರಿಂದ ಜನರು ರೋಸಿ ಹೋಗಿದ್ದಾರೆ. ಸೋಂಕಿತರಿಗೆ ಚಿಕಿತ್ಸೆಯೇ ಸಿಗುತ್ತಿಲ್ಲ ಎಂಬ ಆಪಾದನೆ ಕೇಳಿ ಬರುತ್ತಿದೆ.

ಇನ್ನೂ ಜಿಲ್ಲೆಯಲ್ಲಿ ರವಿವಾರ ದೃಢಪಟ್ಟ ಸೋಂಕಿತರ ಪೈಕಿ ಗಂಗಾವತಿ ತಾಲೂಕಿನಲ್ಲಿ 57 ಜನ, ಕೊಪ್ಪಳ ತಾಲೂಕಿನಲ್ಲಿ 88, ಕುಷ್ಟಗಿ ತಾಲೂಕಿನಲ್ಲಿ 27, ಯಲಬುರ್ಗಾ ತಾಲೂಕಿನಲ್ಲಿ 30 ಜನರು ಸೇರಿ ಈ ದಿನದಂದು 202 ಜನರಿಗೆ ಸೋಂಕು ತಗುಲಿದ್ದರೆ, ಒಟ್ಟಾರೆ ಸೋಂಕಿತರ ಸಂಖ್ಯೆ ಲೆಕ್ಕಾ ಹಾಕಿದಾಗ ಗಂಗಾವತಿ ತಾಲೂಕಿನಲ್ಲಿ ಈವರೆಗೂ 3,117 ಜನ, ಕೊಪ್ಪಳ ತಾಲೂಕು-1,994, ಕುಷ್ಟಗಿ ತಾಲೂಕು-768, ಯಲಬುರ್ಗಾ ತಾಲೂಕಿನಲ್ಲಿ 574 ಜನರು ಸೇರಿ ಒಟ್ಟಾರೆ ಈವರೆಗೂ 6,453 ಜನರಿಗೆ ಸೋಂಕು ತಗುಲಿದೆ. ಇವರಲ್ಲಿ 147 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಇನ್ನೂ ಭಾನುವಾರ 192 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, ಒಟ್ಟಾರೆ ಈವರೆಗೂ 4,687 ಜನರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನೂ ಇದೇ ದಿನವೇ 152 ಜನರು ಹೋಂ ಐಸೋಲೇಷನ್‌ಗೆ ಒಳಗಾಗಿದ್ದಾರೆ. ಒಟ್ಟಾರೆ ಈವರೆಗೂ 1,358 ಜನರು ಹೋಂ ಐಸೋಲೇಷನ್‌ ಗೆ ಒಳಗಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next