Advertisement

ಕೋವಿಡ್ ಪ್ರಕರಣ : ರಾಜ್ಯದ ಆರೋಗ್ಯ ಅಧಿಕಾರಿಗಳೊಂದಿಗೆ ಕೇಂದ್ರ ಅರೋಗ್ಯ ಸಚಿವರ ಸಭೆ

01:09 PM Jan 03, 2022 | Team Udayavani |

ಪಣಜಿ : ದೇಶಾದ್ಯಂತ ಕೋವಿಡ್ ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಮಂತ್ರಿ ಡಾ. ಮನ್ಸುಖ್ ಮಾಂಡವಿಯಾ ರವರು ಎಲ್ಲ ರಾಜ್ಯಗಳ ಆರೋಗ್ಯ ಇಲಾಖೆಯ ಪ್ರಮುಖರೊಂದಿಗೆ ವರ್ಚುವಲ್ ಸಭೆ ನಡೆಸಿದರು.

Advertisement

ಕರೋನಾ ಸೋಂಕು ನಿಯಂತ್ರಿಸಲು ಅಗತ್ಯ ಕ್ರಮ, ಲಸಿಕೆ ಅಭಿಯಾನ, ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳಿಂದ ಕೇಂದ್ರ ಮಂತ್ರಿ ಮಾಂಡವಿಯಾ ರವರು ಮಾಹಿತಿ ಪಡೆದುಕೊಂಡರು. ವರ್ಚುವಲ್ ಸಭೆಯಲ್ಲಿ ಗೋವಾ ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಉಪಸ್ಥಿತರಿದ್ದು- ಓಮೆಕ್ರಾನ್‍ಗೆ ಸಂಬಂಧಿಸಿದ ನಿಯಮಾವಳಿಗಳನ್ನು ಹೊರಡಿಸಲು ಮತ್ತು ಕೋವಿಡ್-19 ಪರೀಕ್ಷೆಗೆ ಜೀನೋಮ್ ಸಿಕ್ವೆನ್ಸಿಂಗ್ ಯಂತ್ರವನ್ನು ಒದಗಿಸುವಂತೆ ಗೋವಾ ಸರ್ಕಾರವು ಕೇಂದ್ರದ ಬಳಿ ಒತ್ತಾಯಿಸಿತು.

ಹೊಸ ವರ್ಷ ಸಂಭ್ರಮಾಚರಣೆಯ ನಂತರ ಗೋವಾದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಕಳೆದ ವರ್ಷವೂ ಕೂಡ ಇದೇ ತಿಂಗಳಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿತ್ತು.

ಇದನ್ನೂ ಓದಿ : ರಾಮ ಇಲ್ಲ, ಹನುಮಂತ ಇಲ್ಲ ಎಂಬ ಸ್ಟೇಟಸ್ :ಕೋಮು ಘರ್ಷಣೆ,ಇಬ್ಬರಿಗೆ ಚೂರಿ ಇರಿತ,10 ಜನರಿಗೆ ಗಾಯ 

Advertisement

Udayavani is now on Telegram. Click here to join our channel and stay updated with the latest news.

Next