Advertisement
ಮಡಿ ಮೈಲಿಗೆಯ ಆಚರಣೆ ಮಾಡುವವರು ಇಂದು ಎಷ್ಟು ಜನರಿದ್ದಾರೆ? ಕೊರೊನಾ ಕಾಲದಲ್ಲಿ ಕೈಕಾಲು ಮುಖ ತೊಳೆಯುವುದು, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಪಾಡುವುದು ಇತ್ಯಾದಿ ಸಮಾಜದ ಬಹುತೇಕರಿಗೆ ಶಿಕ್ಷೆಯಂತೆ ಭಾಸವಾಗಿರುವುದು ಸುಳ್ಳಲ್ಲ. ಹೀಗೆಂದು ಈ ಮಡಿವಂತಿಕೆಯನ್ನು ಎಲ್ಲ ಕಡೆಯೂ ಆಚ ರಿಸಬೇಕೆಂದಿಲ್ಲ, ಅದರ ಅಗತ್ಯವೂ ಇಲ್ಲ. ನಮ್ಮ ಮನೆಯೊಳಗಿರುವಾಗ ಯಾವುದೇ ನಿಯ ಮಪಾಲನೆಯ ಆವಶ್ಯಕತೆ ಇಲ್ಲ. ಆದರೆ ಮನೆ ಯಿಂದ ಹೊರಬಿದ್ದೊಡನೆ ಮಡಿವಂತಿಕೆ ಆರಂಭ ವಾಗಬೇಕು. ಸಾಮಾಜಿಕ ಅಂತರ ಕಾಪಾಡುವುದು, ಬೇರೆಯವರು ಸೇವಿಸಿರುವ ಎಂಜಲು ಆಹಾರ ವನ್ನು ಸೇವಿಸದಿರುವುದು, ಒಂದೇ ಲೋಟದಲ್ಲಿ ಇಬ್ಬರು ನೀರು ಕುಡಿಯದಿರುವುದು, ಮಾಸ್ಕ್ ಧರಿಸದವನಿಂದ ದೂರವಿರುವುದು ಇವೆಲ್ಲ ವಿಚಾರಗಳು ಕೊರೊನಾದ ಮಡಿವಂತಿಕೆಯಲ್ಲಿ ಬರುತ್ತವೆ. ಇವೆಲ್ಲವನ್ನು ಎಲ್ಲರೂ ಆಚರಿಸಿದಾಗ ಮಾತ್ರ ಕೊರೊನಾದ ನಿರ್ಮೂಲನೆ ಸಾಧ್ಯ.
Related Articles
Advertisement
ಸಮಾಜದಲ್ಲಿನ ಹೆಚ್ಚಿನ ಜನರಿಗೆ ಕಾಡು ಪ್ರಾಣಿಗಳಂಥ ಸ್ವೇಚ್ಛಾಚಾರದ ಜೀವನ ಅಭ್ಯಾ ಸವಾಗಿದೆ. ಇದು ಪ್ರಜಾಪ್ರಭುತ್ವ, ಇಲ್ಲಿ ಏನು ಮಾಡಿದರೂ ನಡೆಯುತ್ತದೆ ಎನ್ನುವ ಮನೋ ಭಾವವಿದೆ. ಆದುದರಿಂದ ಯಾವುದೇ ನಿಯಮ ಪಾಲನೆ ಮಾಡುವುದೆಂದರೆ ಬೋನಿನೊಳಗೆ ಬಿದ್ದ ಪ್ರಾಣಿಯಂತೆ ಚಡಪಡಿಸುತ್ತಾರೆ. ಲಾಕ್ಡೌನ್ ಇದ್ದರೂ ಬೋನಿನಿಂದ ತಪ್ಪಿಸಿಕೊಂಡು ಬಂದ ಪ್ರಾಣಿಗಳಂತೆ ಬೀದಿ ಬೀದಿ ಸುತ್ತುತ್ತಾರೆ. ಆದರೆ ಇನ್ನು ಕೆಲವರಿಗೆ ಮನೆಯೊಳಗೇ ಒಂದೆರಡು ದಿನ ಕಳೆಯುವುದೂ ಸಾಧ್ಯವಿಲ್ಲದಂಥ ಪರಿಸ್ಥಿತಿ ಇದೆ. ಇಂದು ದುಡಿದರೆ ಮಾತ್ರ ಅವರಿಗೆ ಊಟ. ಇಲ್ಲವಾದರೆ ಹಸಿದೇ ಇರಬೇಕೆನ್ನುವ ಪರಿಸ್ಥಿತಿ ಇದೆ. ಅಂಥವರು ಸರಕಾರ ಯಾವ ನಿಯಮ ತಂದರೂ ಪಾಲಿಸಲಾರರು. ಇಂದು ದುಡಿದದ್ದರಲ್ಲಿ ಸ್ವಲ್ಪ ನಾಳೆಗಾಗಿ ಉಳಿಸಿದರೆ ಮಾತ್ರ ಇಂಥ ಕಾಯಿಲೆಗಳು ಬಂದ ಸಂದರ್ಭದಲ್ಲಿ ನಿಯ ಮಪಾಲನೆ ಸಾಧ್ಯ. ವಿದ್ಯಾರ್ಥಿಗಳು, ಶಿಕ್ಷಕರು, ಕಂಪ್ಯೂಟರ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆಲ್ಲ ನಿಯಮಪಾಲನೆ ಸುಲಭ. ಅವರು ಮನೆಯಲ್ಲಿದ್ದೆ ಕಲಿಯಬಹುದು, ಕಲಿಸಬಹುದು ಅಥವಾ ಗಳಿಸಬಹುದು. ಇದರಿಂದಾಗಿ ಅವರ ವೇದನೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು. ಆದರೆ ವ್ಯಾಪಾರಿಗಳು, ಕೂಲಿ ಕೆಲಸದವರು, ಕಲಾವಿದರು, ಈ ವೈರಾಣುವಿನಿಂದಾಗಿ ತಮ್ಮ ಸಂಪಾದನೆಯನ್ನು ಕಳೆದುಕೊಂಡು, ಕೂಡಿಟ್ಟದ್ದನ್ನೂ ಖರ್ಚು ಮಾಡಿ ಅಪಾರ ವೇದನೆಯನ್ನು ಅನುಭವಿಸುತ್ತಿದ್ದಾರೆ.
ಕೊರೊನಾ ನಿಯಮ ಪಾಲನೆ ಶತಮಾನದ ವೇದನೆಯೇ ಸರಿ. ಆದರೆ ಕೆಲವು ಮೂಲ ವಿಷಯ ಗಳತ್ತ ಗಮನಹರಿಸಿದರೆ ಈ ವೈರಾಣುವನ್ನು ಬಹಳಷ್ಟು ಮಟ್ಟಿಗೆ ಹತೋಟಿಯಲ್ಲಿಡಬಹುದು. ಪ್ರತಿಯೊಬ್ಬರೂ ಸಾರ್ವಜನಿಕ ಸ್ಥಳಗಳಲ್ಲಿ, ಸಭೆ, ಸಮಾರಂಭಗಳಲ್ಲಿ ಮಾಸ್ಕ್ ಧರಿಸಲೇ ಬೇಕು. ಅದೇನೂ ಮಾಡಲಾಗದ ಕೆಲಸವಲ್ಲ. ಸಭೆ ಸಮಾರಂಭಗಳಿಗೆ ಅತೀ ಆವಶ್ಯಕತೆ ಇದ್ದರೆ ಮಾತ್ರ ಹೋಗಬೇಕು. ಹೋದರೂ ಕೈ ಕುಲುಕು ವುದಾಗಲೀ ತುಂಬಾ ಹತ್ತಿರ ನಿಂತು ಮಾತಾಡು ವುದಾಗಲೀ ಮಾಡಬಾರದು. ವೈದ್ಯರು ಹೇಳಿದ ಲಸಿಕೆಯನ್ನು ತೆಗೆದುಕೊಂಡು ರೋಗ ನಿರೋ ಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಜೀವನ ದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೆ ಸುಂದರ ನಾಳೆಯ ಕನಸು ಕಾಣುತ್ತ ಇನ್ನಷ್ಟು ದಿನ ಕಟ್ಟು ನಿಟ್ಟಾಗಿ ನಿಯಮಪಾಲನೆ ಮಾಡಿದರೆ ಕೊರೊನಾ ವನ್ನು ಹತೋಟಿಗೆ ತರುವ ಮೂಲಕ ಈ ವರ್ಷದಲ್ಲಾದರೂ ಸಂಭ್ರಮಿಸಬಹುದು.
– ಡಾ| ಸತೀಶ ನಾಯಕ್ ಆಲಂಬಿ