Advertisement

ಮಾರ್ಗಸೂಚಿ ಪಾಲನೆ ಮರೀಚಿಕೆ

06:27 PM May 13, 2021 | Team Udayavani |

ಅರಸೀಕೆರೆ: ಸರ್ಕಾರ ಬಿಗಿ ಲಾಕ್‌ಡೌನ್‌ ಜಾರಿ ಹಿನ್ನೆಲೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿ ರುವಂತೆಯೇ ಸೋಂಕಿನ ಪ್ರಮಾಣ ಇಳಿ ಮುಖವಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಜನರು ಈಗಲೂ ಮಾರ್ಗಸೂಚಿ ಪಾಲನೆ ಯಲ್ಲಿ ಹಿಂದೆ ಬಿದ್ದಿದ್ದಾರೆ. ಪೊಲೀಸರ ಸರ್ಕಾರದ ನಿಯಮ ಜಾರಿಗೆ ತರಲು ರೋಡಿಗಿಳಿದಿದ್ದು, ಅವರನ್ನು ಕಣ್ಣ ತಪ್ಪಿಸಿ ಜನರು ಓಡಾಟ ನಡೆಸುತ್ತಿರುವುದು ಕಂಡು ಬಂದಿದೆ.

Advertisement

ಕೊರೊ ನಾ ದಿಂದ ಹೋಂ ಐಸೋಲೇಷನ್‌ನಲ್ಲಿ ಇರುವವರೂ ಬೆಳಗ್ಗೆ ಹಣ್ಣು ತರಕಾರಿ ಖರೀದಿಗೆ ಆಗಮಿಸುತ್ತಿದ್ದು, ಸೋಂಕು ಉಲ್ಬಣದ ಭೀತಿ ಎದುರಾಗಿದೆ. ಶಾಸಕ ಕೆ.ಎಂ.ಶಿವಲಿಂಗೇಗೌಡರು ಗ್ರಾಮೀಣ ಪ್ರದೇಶಕ್ಕೆ ಭೇಟಿ ನೀಡಿದ್ದು, ಅವರ ಅಕ್ಕ-ಪಕ್ಕದಲ್ಲಿಯೇ ಇಬ್ಬರು ಸೊಂಕೀತರು ಹಾಜರಾಗಿದ್ದು ತಿಳಿಯುತ್ತಿದ್ದಂತೆ ಹೋಂ ಐಸೋಲೇಷನ್‌ ಅಲ್ಲಿ ಇಡಲು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಈ ಅವಾಂತರ ಸೃಷ್ಟಿ ತಡೆಯಲು ಕಳೆದ ಬಾರಿ ಕೈಗೆ ಸೀಲ್‌ ಹಾಕಲಾಗುತ್ತಿತ್ತು. ಆದರೆ ಈ ಬಾರಿ ಕೈಗೆ ಸೀಲ್‌ ಹಾಕುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಲಾಕ್‌ಡೌನ್‌ ವೇಳೆಯಲ್ಲಿ ಸೋಂಕಿತರು ಹೊರ ಬಂದರೆ ಮೊಕದ್ದಮೆ ದಾಖಲಿಸುವುದಗಿ ಪೊಲೀಸರು ಹೇಳುತ್ತಿದ್ದಾರೆ. ಆದರೆ, ಇವರೇ ಸೋಂಕಿತರು ಎಂದು ಹೇಗೆ ಕಂಡುಹಿಡಿಯ ತ್ತಾರೆ ಎಂಬುದು ಮಾತ್ರ ತಿಳಿ ಯುತ್ತಿಲ್ಲ ಎಂದು ಜನರು ದೂರಿದ್ದಾರೆ. ಇನ್ನು 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್‌ ನೀಡಲು ಆನ್‌ಲೈನ್‌ ನೋಂದಣಿ ಮಾಡಿಕೊಳ್ಳ ಲಾಗುತ್ತಿದ್ದು, ನೋಂದಣಿ ಮಾಡಿಸಿ ಸ್ಥಳಕ್ಕೆ ತೆರಳಿದರೆ ವಾಪಸ್‌ ಬರುವ ಸ್ಥಿತಿ ನಿರ್ಮಾಣ ವಾಗಿದೆ. 2ನೇ ಡೋಸ್‌ ಪಡೆಯುವವವರು ಪರ ದಾಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next