Advertisement

ಪದವಿ ವಿದ್ಯಾರ್ಥಿಗಳಿಗೆ “ಪರೀಕ್ಷಾ ಭೀತಿ’

05:34 PM Nov 22, 2020 | Suhan S |

ರಾಯಚೂರು: ಕಷ್ಟಪಟ್ಟು ಓದಿದರೂ ಪರೀಕ್ಷೆ ಎಂದರೆ ಭಯ ಪಟ್ಟುಕೊಳ್ಳುತ್ತಿದ್ದ ವಿದ್ಯಾರ್ಥಿಗಳು ಈಗ ಕೋವಿಡ್‌-19 ಪರೀಕ್ಷೆ= ಮಾಡಿಸಿಕೊಳ್ಳಲು ಭಯ ಪಡುತ್ತಿದ್ದಾರೆ.

Advertisement

ಕಾಲೇಜಿಗೆ ಬರಲು ಕೋವಿಡ್‌-19 ಪರೀಕ್ಷಾ ವರದಿ ಕಡ್ಡಾಯಗೊಳಿಸಿರುವ ಸರ್ಕಾರದನಿಯಮದಿಂದ ಕಾಲೇಜಿನತ್ತ ಯಾವೊಬ್ಬ ವಿದ್ಯಾರ್ಥಿ ಕೂಡ ಸುಳಿಯದಂತಾಗಿದೆ. ಶುರುವಾಗಿ ನಾಲ್ಕು ದಿನ ಕಳೆದರೂ ನಗರದ ಬಹುತೇಕ ಕಾಲೇಜುಗಳು ವಿದ್ಯಾರ್ಥಿಗಳಿಲ್ಲದೇ ಭಣಗುಡುತ್ತಿವೆ. ಇಲ್ಲಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳಿದ್ದರೂಶನಿವಾರ ಕೇವಲ ನಾಲ್ಕು ವಿದ್ಯಾರ್ಥಿನಿಯರು ಮಾತ್ರ ಆಗಮಿಸಿದ್ದರು. ಮೊದಲ ದಿನ ಬಂದಿದ್ದಎಂಕಾಂ ವಿದ್ಯಾರ್ಥಿನಿ ಕೂಡ ಸಹಪಾಠಿಗಳಿಲ್ಲದೇ ಬರುವುದನ್ನು ನಿಲ್ಲಿಸಿದ್ದಾರೆ. ಇನ್ನೂ ಬಿಎ ವಿದ್ಯಾರ್ಥಿಗಳಂತೂ ಕಾಲೇಜಿನತ್ತ ಸುಳಿದೇ ಇಲ್ಲ. ಅದು ಮಾತ್ರವಲ್ಲ ಬೇರೆ ಕಾಲೇಜುಗಳಿಗೂ ಮಕ್ಕಳು ಸುಳಿಯುತ್ತಿಲ್ಲ. ಇದರಿಂದ ಕಾಲೇಜುಗಳಲ್ಲಿ ಬೋಧಕರು ವಿದ್ಯಾರ್ಥಿಗಳಿಗಾಗಿ ಕಾದು ಕೂಡುವಂತಾಗಿದೆ. ಕಾಲೇಜಿಗೆ ಬರುತ್ತಾರಾದರೂ ಏನು ಬೇಕು ಎಂದು ವಿಚಾರಿಸಿಕೊಂಡು ಮರಳಿ ಹೋಗುತ್ತಾರೆ. ಮತ್ತೆ ಸುಳಿಯವುದೆ ಇಲ್ಲ.

ಪರೀಕ್ಷೆಗೆ ನಿರಾಸಕ್ತಿ: ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲು ವಿದ್ಯಾರ್ಥಿಗಳಲ್ಲಿ ಸಂಪೂರ್ಣ ನಿರಾಸಕ್ತಿ ಕಂಡು ಬರುತ್ತಿದೆ. ಜಿಲ್ಲಾಡಳಿತ ನೀಡುವ ವರದಿಯಲ್ಲಿ ಹೆಚ್ಚು ಪರೀಕ್ಷೆ ನಡೆಸಿರುವ ಮಾಹಿತಿ ಇಲ್ಲ. ಪರೀಕ್ಷೆ ಮಾಡಿಸಿಕೊಳ್ಳಲು ಹೋಗುವ ವಿದ್ಯಾರ್ಥಿಗಳು ಕೂಡ ನಮಗೆ ನೆಗೆಟಿವ್‌ ವರದಿ ಕೊಡಿ ಎಂದು ಕೇಳುತ್ತಿದ್ದಾರೆ. ಪರೀಕ್ಷೆಯೇ ಮಾಡಿಸಿಕೊಳ್ಳದೆ ವರದಿ ನೀಡಲ್ಲ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಹೇಳಿದರೆ ಪರೀಕ್ಷೆಗೊಳಪಡದೆ ಹಿಂದಿರುಗುತ್ತಿದ್ದಾರೆ. ಇನ್ನು ಪಾಲಕರು ಕೂಡಮಕ್ಕಳು ಕಾಲೇಜಿಗೆ ಹೋಗುವುದು ಬೇಡ ಎನ್ನುವ ರೀತಿಯಲ್ಲೇ ಮಾತನಾಡುತ್ತಿದ್ದಾರೆ. ಇದರಿಂದ ಕಾಲೇಜುಗಳು ಭಣ ಭಣ ಎನ್ನುವಂತಾಗಿದೆ.

ಆನ್‌ಲೈನ್‌ ಕ್ಲಾಸ್‌ಗೆ ಒತ್ತು: ನಾಲ್ಕು ದಿನ ಕಳೆದರೂ ವಿದ್ಯಾರ್ಥಿಗಳ ಸುಳಿವಿಲ್ಲದ್ದನ್ನು ಅರಿತ ಕಾಲೇಜಿನ ಆಡಳಿತ ಮಂಡಳಿಗೂ ಆನ್‌ಲೈನ್‌ ಕ್ಲಾಸ್‌ಗಳಿಗೆ ವಿಶೇಷ ಒತ್ತು ನೀಡುತ್ತಿವೆ. ಎಲ್ಲ ಬೋಧಕರಿಗೆ ಆನ್‌ಲೈನ್‌ ಕ್ಲಾಸ್‌ಗಳನ್ನು ಕಡ್ಡಾಯವಾಗಿನಡೆಸುವಂತೆತಿಳಿಸಲಾಗಿದೆ. ವಾಟ್ಸ್‌ಆ್ಯಪ್‌ ಗ್ರೂಪ್‌ ಗಳಿವೆ. ಬೋಧನೆ ಮಾಡಿದ ವಿಡಿಯೋಗಳನ್ನುಕಳುಹಿಸಲಾಗುತ್ತಿದೆ. ಈಗಾಗಲೇ ಸಂಬಂ ಧಿಸಿದ ತರಗತಿಗಳು ಬೋಧಕರು ವಿದ್ಯಾರ್ಥಿಗಳ ವಾಟ್ಸ್‌ ಆ್ಯಪ್‌ ಗ್ರೂಪ್‌ಗ್ಳಲ್ಲೇ ಸಂವಹನ ನಡೆಸುತ್ತಿದ್ದಾರೆ.

ವರದಿಯೇ ಬಂದಿಲ್ಲ: ನಗರದ ಸರ್ಕಾರಿ ಪದವಿ ಕಾಲೇಜಿನ ಬೋಧಕ ವೃಂದದವರ ಕೋವಿಡ್‌-19 ಪರೀಕ್ಷಾ ವರದಿ ಇನ್ನೂ ನೀಡಿಲ್ಲ. 26 ಕಾಯಂಉಪನ್ಯಾಸಕರು, 10 ಅತಿಥಿ ಉಪನ್ಯಾಸಕರು,ಬೋಧಕೇತ ಸಿಬ್ಬಂದಿ ಸೇರಿದಂತೆ 40ಕ್ಕೂ ಅಧಿಕ ಸಿಬ್ಬಂದಿ ಇದ್ದಾರೆ. ನ.13ರಂದು ಕಾಲೇಜಿನಲ್ಲಿ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ಪರೀಕ್ಷೆಗೆ ಒಳಪಟ್ಟಿದ್ದಾರೆ. ಈವರೆಗೂ ವರದಿ ನೀಡಿಲ್ಲ

Advertisement

ನಾಲ್ಕು ದಿನ ಕಳೆದರೂ ವಿದ್ಯಾರ್ಥಿಗಳು ಬರದಿರುವುದು ಅಚ್ಚರಿ ಮೂಡಿಸಿದೆ. ಸಾವಿರಾರು ವಿದ್ಯಾರ್ಥಿಗಳಿದ್ದು, ನಾಲ್ಕು ಜನ ಬಂದಿದ್ದಾರೆ.ಪರೀಕ್ಷೆ ಮಾಡಿಸಿಕೊಳ್ಳಲು ಹೆದರಿದ್ದು, ಮನೆಯಲ್ಲಿ ಪಾಲಕರು ಒಪ್ಪಿಗೆ ನೀಡುತ್ತಿಲ್ಲ. ಹೀಗಾಗಿ ಆನ್‌ಲೈನ್‌ ತರಗತಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಪ್ರೊ| ಮಲ್ಲನಗೌಡ, ಪ್ರಾಚಾರ್ಯ, ಸರ್ಕಾರಿ ಪದವಿ ಕಾಲೇಜ್‌.

ಕೋವಿಡ್‌-19 ಪರೀಕ್ಷೆಗೆ ವಿಶೇಷ ಕೇಂದ್ರ ಆರಂಭಿಸಿಲ್ಲ.ಆಯಾ ತಾಲೂಕು ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿಕೊಂಡರೆ ವರದಿ ನೀಡಲಾಗುವುದು. ಮಾದರಿಗಳ ಸಂಗ್ರಹದ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡು ಬರುತ್ತಿಲ್ಲ.ನಿತ್ಯ ಒಂದು ಸಾವಿರ ಮಾದರಿಗಳ ಪರೀಕ್ಷೆ ಮಾಡುವ ಸಾಮರ್ಥ್ಯದ ಯಂತ್ರಗಳಿದ್ದು, ವಿಳಂಬವಾಗಲ್ಲ. ಡಾ|ಬಸವರಾಜ್‌ ಪೀರಾಪುರೆ, ರಿಮ್ಸ್‌ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next