Advertisement

ಕೋವಿಡ್ 19 ಎರಡನೇ ಅಲೆ ಭೀತಿ: ಇಂದಿನಿಂದ ಕುಕ್ಕೆ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ

04:12 PM Apr 21, 2021 | Team Udayavani |

ಸುಬ್ರಹ್ಮಣ್ಯ: ರಾಜ್ಯಾದ್ಯಂತ ಕೋವಿಡ್ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವನ್ನು ಇಂದಿನಿಂದ ಮುಂದಿನ ಆದೇಶದವರೆಗೆ ಸಾರ್ವಜನಿಕರಿಗೆ ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ.

Advertisement

ಇದನ್ನೂ ಓದಿ : ಅಸಹಾಯಕರಾಗಿದ್ದೇವೆ, ಬೆಡ್-ಆಕ್ಸಿಜನ್ ಇಲ್ಲ, ಮುನ್ನೆಚ್ಚರಿಕೆಯಿಂದ ಇರಿ : ವೈದ್ಯೆ ಕಣ್ಣೀರು

‌ದೇವರ ದರ್ಶನ, ಸೇವೆ, ತೀರ್ಥ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ವಿಶೇಷ ಉತ್ಸಾವಾದಿಗಳನ್ನು ತಡೆಹಿಡಿಯಲಾಗಿದೆ. ದೇವಸ್ಥಾನದ ವಸತಿಗೃಹ, ಅತಿಥಿ ಗೃಹಗಳನ್ನು ಭಕ್ತರಿಗೆ ಅಥವಾ ಸಾರ್ವಜನಿಕರಿಗೆ ಹಂಚಿಕೆ ಮಾಡದಿರಲು ಸೂಚಿಸಲಾಗಿದೆ. ಈಗಾಗಲೇ ಸೇವೆಗಳನ್ನು ಬುಕ್ ಮಾಡಿದವರಿಗೆ ಸೇವೆ ಆರಂಭವಾದ ಬಳಿಕ ಆಧ್ಯತೆ ಮೇರೆಗೆ ಸೇವಾ ಅವಕಾಶ ನೀಡಲಾಗುವುದು ಎಂದು ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇಒ ಡಾ.ನಿಂಗಯ್ಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next