Advertisement

ಕರ್ನಾಟಕ ಸಹಿತ 8 ರಾಜ್ಯ ಸಂಕಷ್ಟ

12:30 AM Aug 04, 2021 | Team Udayavani |

ಹೊಸದಿಲ್ಲಿ: ಕೊರೊನಾ ಮೂರನೇ ಅಲೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕರ್ನಾಟಕ ಸಹಿತ ದೇಶದ ಎಂಟು ರಾಜ್ಯಗಳಿಗೆ ಬಿಗಿ ನಿಯಮ ರೂಪಿಸಿಕೊಳ್ಳುವಂತೆ ಎಚ್ಚರಿಕೆ ನೀಡಿದೆ.

Advertisement

ಈ ಎಂಟು ರಾಜ್ಯಗಳಲ್ಲಿ “ಆರ್‌’ ಫ್ಯಾಕ್ಟರ್‌ ಹೆಚ್ಚಿದೆ ಎಂದು ಕೇಂದ್ರ ಹೇಳಿದೆ. ಸೋಂಕು ಒಬ್ಬರಿಂದ ಎಷ್ಟು ಮಂದಿಗೆ ಹರಡುತ್ತದೆ ಎಂಬುದನ್ನು “ಆರ್‌ ಫ್ಯಾಕ್ಟರ್‌’ ವಿವರಿಸುತ್ತದೆ. ಆರ್‌ ಫ್ಯಾಕ್ಟರ್‌ ಹೆಚ್ಚಿದೆ ಎಂದರೆ ಒಬ್ಬರಿಂದ ಹಲವು ಮಂದಿಗೆ ಸೋಂಕು ಪ್ರಸಾರವಾಗುತ್ತಿದೆ ಎಂದರ್ಥ. ಕರ್ನಾಟಕ, ಕೇರಳ, ತ.ನಾಡು, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ, ಮಿಜೋರಾಂ ಮತ್ತು ಪುದುಚೇರಿಗಳಲ್ಲಿ ಆರ್‌ ಫ್ಯಾಕ್ಟರ್‌ 1:2 ಇದೆ. ಅಂದರೆ ಒಬ್ಬರಿಗೆ ಸೋಂಕು ತಗಲಿದರೆ ಅವರಿಂದ ಇಬ್ಬರಿಗೆ ಸೋಂಕು ಹರಡುತ್ತಿದೆ.

ಆರ್‌ ಫ್ಯಾಕ್ಟರ್‌ ಹೆಚ್ಚಿರುವಲ್ಲಿ ನಿಗಾ ವಹಿಸಬೇಕು. ಸೋಂಕು ಹರಡದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಹಾಗೆಯೇ 12 ರಾಜ್ಯಗಳ 44 ಜಿಲ್ಲೆ ಗಳಲ್ಲಿ ಪಾಸಿಟಿವಿಟಿ ದರ ಶೇ. 10ಕ್ಕಿಂತ ಹೆಚ್ಚಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ದೇಶದ 18 ಜಿಲ್ಲೆಗಳಲ್ಲಿ ಕೊರೊನಾ ಏರಿಕೆಯ ಹಾದಿ ಕಾಣಿಸುತ್ತಿದೆ. ಇದರಲ್ಲಿ 10 ಜಿಲ್ಲೆಗಳು ಕೇರಳದಲ್ಲಿವೆ. ದೇಶದ ಶೇ. 50ರಷ್ಟು ಪ್ರಕರಣಗಳು ಕೇರಳದಿಂದಲೇ ವರದಿಯಾಗುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next