Advertisement

ಸಕ್ರಿಯ ಪ್ರಕರಣ 15,000 ದಾಟುವ ಸಾಧ್ಯತೆ?

10:44 PM May 07, 2021 | Team Udayavani |

ಉಡುಪಿ: ರಾಜ್ಯ ಸರಕಾರ ಕೋವಿಡ್ ಎರಡನೇ ಅಲೆ ತಡೆಯುವ ನಿಟ್ಟಿನಲ್ಲಿ ಲಾಕ್‌ಡೌನ್‌ ಘೋಷಿಸಿದ್ದರೂ, ಜನರ ಓಡಾಟ ನಿಂತಿಲ್ಲ. ಮೂರು ದಿನಗಳಿಂದ ಜಿಲ್ಲೆಯಲ್ಲಿ ನಿತ್ಯ ಸರಿ ಸುಮಾರು 1,500 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗುತ್ತಿರುವುದು ಆತಂಕ ಮೂಡಿಸಿದೆ.

Advertisement

ಜಿಲ್ಲೆಯಲ್ಲಿ ಕಳೆದ ಎ.25ರಿಂದ ಮೇ 6ರ ವರೆಗಿನ 11 ದಿನದಲ್ಲಿ ಸೋಂಕಿತರ ಸಂಖ್ಯೆ 8,116ಕ್ಕೆ ಏರಿಕೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 28,776ನಿಂದ 36,892ಕ್ಕೇರಿದೆ.

ಪಾಸಿಟಿವ್‌ ಪ್ರಕರಣ ಹೆಚ್ಚಾಗುತ್ತಿದ್ದಂತೆ ಮೃತರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಇದುವರೆಗೆ ಜಿಲ್ಲೆಯಲ್ಲಿ 211 ಮಂದಿ ಮೃತಪಟ್ಟಿದ್ದಾರೆ.

ನಿಯಮ ಮರೆತ ಜನ :

ಸರಕಾರ ದಿನಸಿ ಕೊಳ್ಳುವಾಗ ನೂಕು ನುಗ್ಗಲಾಗುತ್ತದೆ, ಜನದಟ್ಟಣೆ ಹೆಚ್ಚಾಗು ತ್ತದೆ, ಸಾಮಾಜಿಕವಾಗಿ ದೈಹಿಕ ಅಂತರ ಮರೆಯಾಗುತ್ತದೆ ಎಂಬ ಕಾರಣದಿಂದ ನಿಯಮಾವಳಿಯನ್ನು ಕೊಂಚ ಸಡಿಲಿಸಿದೆ. ಅದನ್ನೇ ಬಂಡವಾಳ ಮಾಡಿಕೊಂಡ ಜನರು ಸಾರ್ವಜನಿಕರು ಖರೀದಿ ಹೆಸರಿನಲ್ಲಿ ರಸ್ತೆಯಲ್ಲಿ ತಿರುಗಾಡುವುದು ಕಂಡು ಬರುತ್ತಿತ್ತು. ಕಳೆದೆರಡು ದಿನದಿಂದ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.

Advertisement

ಮೇ 7ರ ಬೆಳಗ್ಗೆ ಮನೆಯಿಂದ ಹೊರ ಬರುವವರ ಸಂಖ್ಯೆ ತುಸು ಕಡಿಮೆ ಆಗಿತ್ತು. ಮಧ್ಯಾಹ್ನ 12 ಗಂಟೆಯ ಬಳಿಕ ದ್ವಿಚಕ್ರ ವಾಹನ  ಹಾಗೂ ಸಾರ್ವಜನಿಕರ ಓಡಾಟ ಸಂಪೂರ್ಣವಾಗಿ  ನಿಲುಗಡೆಯಾಗಿತ್ತು.

 370ಕ್ಕೂ ಹೆಚ್ಚು ಪ್ರಕರಣ ದಾಖಲು :

ಕೋವಿಡ್ ಪ್ರಕರಣಗಳು ಹೆಚ್ಚಾಗು ತ್ತಿದ್ದರೂ ಸಾರ್ವಜನಿಕರು ನಗರ ಪ್ರದೇಶದಲ್ಲಿ ಕಾರಣವಿಲ್ಲದೆ ಸುತ್ತಾಟ ನಡೆಸುವುದನ್ನು  ಮಾತ್ರ ಕಡಿಮೆ ಮಾಡಿಲ್ಲ. ಪೊಲೀಸರು ಅನಗತ್ಯ ಸಂಚರಿಸುವವರ ವಾಹನಗಳನ್ನು ತಪಾಸಣೆ  ನಡೆಸಿ ದಂಡ ವಿಧಿಸಿದ್ದಾರೆ. ಆಯಾ ಪ್ರದೇಶದಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಕಿದ್ದಾರೆ.

ಜಿಲ್ಲೆಯಲ್ಲಿ ಎ. 28ರಿಂದ ಮೇ 4 ರವರೆಗೆ ಒಟ್ಟು 370 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ದ್ವಿಚಕ್ರ ವಾಹನ ಸವಾರರು ಅತ್ಯಧಿಕ ಸಂಖ್ಯೆಯಲ್ಲಿ ನಿಯಮ ಉಲ್ಲಂಘಿ ಸಿದ್ದಾರೆ.

 ಶೇ. 60 ಹೋಮ್‌ ಐಸೋಲೇಶನ್‌ ಶೇ. 40 ಆಸ್ಪತ್ರೆ :

ಈಗ ಏರುತ್ತಿರುವ ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು ಗಮನಿಸಿ ದರೆ ಮೇ ಅಂತ್ಯದೊಳಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 15,000 ದಾಟುವ ಸಾಧ್ಯತೆಯಿದ್ದು, ಒಟ್ಟು ಪಾಸಿಟಿವ್‌ ಪ್ರಕರಣಗಳ ಸಂಖ್ಯೆ 50,000

ದಾಟಲಿದೆ. ಇದರಲ್ಲಿ ಶೇ. 60ರಷ್ಟು ಹೋಮ್‌ ಐಸೋಲೇಶನ್‌ನಲ್ಲಿ ಇರಲಿದ್ದು, ಉಳಿದ ಶೇ. 40ರಷ್ಟು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಾಧ್ಯತೆ ಇದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ 12 ದಿನಗಳಲ್ಲಿ ಆದ ಕೋವಿಡ್‌ ಪ್ರಕರಣಗಳು

ದಿನ       ಪ್ರಕರಣ             ಸಕ್ರಿಯ ಪ್ರಕರಣ

ಎ. 25     319         1,565

ಎ. 26     412         1,687

ಎ. 27     477         1,892

ಎ. 28     664         2,230

ಎ.29     568         2,359

ಎ. 30     660         2,596

ಮೇ 1    430         2,643

ಮೇ 2    319         1,565

ಮೇ 3    529         2,488

ಮೇ 4    556         2,705

ಮೇ 5    1,656     3,925

ಮೇ 6    1,526     5,066

ಜಿಲ್ಲೆಯಲ್ಲಿ  ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಕೋವಿಡ್‌ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಜತೆಗೆ ರೋಗ ಲಕ್ಷಣವಿದ್ದವರು ತತ್‌ಕ್ಷಣ ಆಸ್ಪತ್ರೆಗೆ ತೆರಳಿ ಪರೀಕ್ಷೆಗೆ ಒಳಗಾಗಿ.ಡಾ| ಸುಧೀರ್‌ಚಂದ್ರ ಸೂಡ, ಡಿಎಚ್‌ಒ, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next