Advertisement

ಅರ್ಧ ಶತಕ ದಾಟಿದ ಕೋವಿಡ್ ಕೇಸ್‌

11:45 AM Apr 13, 2021 | Team Udayavani |

ಬಾಗಲಕೋಟೆ: ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ಅರ್ಧ ಶತಕ ದಾಟಿರಲಿಲ್ಲ. ಆದರೆ, ಯುಗಾದಿ ಹಬ್ಬದ ದಿನವಾದ ಸೋಮವಾರ ಜಿಲ್ಲೆಯಲ್ಲಿ 2ನೇ ಅಲೆ ಅರ್ಧ ಶತಕ ದಾಟಿದೆ.

Advertisement

ಜಿಲ್ಲೆಯಲ್ಲಿ ಸೋಮವಾರ 27 ಜನ ಗುಣಮುಖರಾಗಿದ್ದು, ಹೊಸದಾಗಿ 55ಜನರಿಗೆ ಸೋಂಕು ದೃಢಪಟ್ಟಿದೆ. ಅಲ್ಲದೇ2ನೇ ಅಲೆಗೆ ಜಿಲ್ಲೆಯಲ್ಲಿ ಮತ್ತೂಂದು ಬಲಿಯಾಗಿದೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 14,228 ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ ಇಲ್ಲಿಯವರೆಗೆ ಒಟ್ಟು 13868 ಜನ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಹೊಸದಾಗಿ ಬಾಗಲಕೋಟೆ 26, ಮುಧೋಳ12, ಜಮಖಂಡಿ 5, ಬೀಳಗಿ 3, ಬಾದಾಮಿ,ಹುನಗುಂದ ತಲಾ 2 ಹಾಗೂ ಬೇರೆ ಜಿಲ್ಲೆಯ

5 ಜನರಲ್ಲಿ ಸೋಂಕು ದೃಢಪಟ್ಟಿವೆ. ಕೋವಿಡ್‌ ಲ್ಯಾಬ್‌ನಲ್ಲಿ ಪರೀಕ್ಷಿಸಲಾಗುತ್ತಿದ್ದ 1661 ಸ್ಯಾಂಪಲ್‌ಗ‌ಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 490800 ಸ್ಯಾಂಪಲ್‌ಪರಿಕ್ಷೀಸಲಾಗಿದ್ದು, ಈ ಪೈಕಿ 474347ನೆಗೆಟಿವ್‌ ಬಂದಿದ್ದು, ಮೃತರ ಸಂಖ್ಯೆ 138ಕ್ಕೆ ಏರಿಕೆಯಾಗಿದೆ. 222 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

2ನೇ ಅಲೆಗೆ 2ನೇ ಸಾವು: ಬಾಗಲಕೋಟೆ ನವನಗರ ನಿವಾಸಿ, 51 ವರ್ಷದ ಮಹಿಳೆ (ಪಿ-1056082) ತೀವ್ರ ಉಸಿರಾಟದತೊಂದರೆಯಿಂದ (ಸಾರಿ ಕೇಸ್‌) ಬಾಗಲಕೋಟೆಕೆರೂಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.  ಮೃತರನ್ನು ಕೋವಿಡ್‌ ನಿಯಮಾವಳಿಯಂತೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next