Advertisement
ಕೊಲ್ಕತ್ತದಿಂದ ಕಳೆದ ಡಿ.20ರಂದು ತಾಲೂಕಿನಬಿ.ಜಿ.ನಗರಕ್ಕೆ ಆಗಮಿಸಿದ್ದ67ವಿದ್ಯಾರ್ಥಿಗಳಲ್ಲಿ ಕೋವಿಡ್ ನೆಗೆಟಿವ್ವರದಿ ಬಂದಿದ್ದ ಹಿನ್ನೆಲೆಯಲ್ಲಿ ಆ ಎಲ್ಲಾವಿದ್ಯಾರ್ಥಿಗಳನ್ನು 7ದಿನ ಕ್ವಾರಂಟೈನ್ನಲ್ಲಿಡಲಾಗಿತ್ತು. 7ನೇ ದಿನದ ನಂತರ ಎಲ್ಲಾ 67ವಿದ್ಯಾರ್ಥಿಗಳನ್ನು ಮತ್ತೂಮ್ಮೆ ಕೋವಿಡ್ಪರೀಕ್ಷೆಗೊಳಪಡಿಸಿದ ವೇಳೆ ನಾಲ್ಕುಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು.ನಾಲ್ವರು ಸೋಂಕಿತ ವಿದ್ಯಾರ್ಥಿಗಳಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ137ಮಂದಿಯನ್ನು ಪತ್ತೆ ಹಚ್ಚಿರುವ ತಾಲೂಕುಆಡಳಿತ ಕೋವಿಡ್ ಪರೀಕ್ಷೆಗೊಳಪಡಿಸಿದೆ.
Related Articles
Advertisement
ಸೋಂಕು ಹಿನ್ನೆಲೆ: ಶಾಸಕರ ಸಭೆ :
ತಾಲೂಕಿನ ಬಿ.ಜಿ.ನಗರದ 4 ವಿದ್ಯಾರ್ಥಿಗಳಿಗೆ ಸೋಂಕು ಕಂಡಿರುವ ಹಿನ್ನೆಲೆ ಶಾಸಕ ಸುರೇಶ್ಗೌಡ ಅಧಿಕಾರಿಗಳೊಂದಿಗೆ ಕೋವಿಡ್ಮುನ್ನೆಚ್ಚರಿಕೆ ಸಭೆ ನಡೆಸಿದರು. ಆದಿಚುಂಚನಗಿರಿಯಲ್ಲಿಯುವಜನೋತ್ಸವ ನಡೆಯುತ್ತಿದ್ದು, ಕೋವಿಡ್ನಿಯಮಾನುಸಾರವೇ ಕಾರ್ಯಕ್ರಮ ನಡೆಯುತ್ತದೆ. ಬೆಳ್ಳೂರುಭಾಗದಲ್ಲಿ ಕೋವಿಡ್ ಹೆಚ್ಚಳವಾಗಿರಯವ ಹಿನ್ನೆಲೆಯಲ್ಲಿಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. 300ಕ್ಕಿಂತಹೆಚ್ಚು ಜನ ಸೇರದಂತೆ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕಅಂತರ, ಮಾಸ್ಕ್, ಸ್ಯಾನಿಟೈಸರ್ ಸೇರಿ ಕೋವಿಡ್ ಸುರಕ್ಷತೆಗಳನ್ನುಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಾಣವಾಗಬೇಕಾಗಿರುವ ಆಕ್ಷಿಜನ್ ಪ್ಲಾಂಟ್ ಕಳೆದ ಒಂದು ವರ್ಷದಿಂದ ನನೆಗುದಿಗೆ ಬಿದ್ದಿದ್ದು, ಜಿಲ್ಲಾಡಳಿತ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಶಾಸಕಸುರೇಶ್ಗೌಡ ಗಂಭೀರವಾಗಿ ಆರೋಪಿಸಿದರು. ಮನ್ಮುಲ್ಡೇರಿಯಿಂದ ಹಣಕೊಡಲು ಮುಂದಾಗಿದ್ದರೂ ಜಿಲ್ಲಾಡಳಿತಸ್ಪಂದಿಸುತ್ತಿಲ್ಲ. ನಾನು ನಿರಂತರವಾಗಿ ಅಧಿಕಾರಿಗಳ ಸಂಪರ್ಕದಲ್ಲಿದ್ದರೂಕಾಮಗಾರಿ ವಿಳಂಬವಾಗಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಅವರು, ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಗಮನಕ್ಕೆ ತಂದಿದ್ದರೂ ಪ್ರಯೋಜವಾಗಿಲ್ಲ ಎಂದರು.