Advertisement

ದಾವಣಗೆರೆ ಜಿಲ್ಲೆಯಲ್ಲಿ 598 ಮಂದಿ ಗುಣಮುಖ : ಸಾವಿರ ಗಡಿ ದಾಟಿದ ಹೊಸ ಪ್ರಕರಣ

08:33 PM May 26, 2021 | Team Udayavani |

ದಾವಣಗೆರೆ: ಜಿಲ್ಲೆಯಲ್ಲಿ ಬುಧವಾರ ಕೊರೊನಾದಿಂದ ಗುಣಮುಖರಾದ 598 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

Advertisement

ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗದ 245, ಹರಿಹರದಲ್ಲಿ 83, ಜಗಳೂರಿನಲ್ಲಿ 51, ಚನ್ನಗಿರಿ ಯಲ್ಲಿ63, ಹೊನ್ನಾಳಿಯಲ್ಲಿ 125 ಹಾಗೂ ಹೊರ ಜಿಲ್ಲೆಯ 31 ಜನ ಒಳಗೊಂಡಂತೆ 598 ಸೋಂಕಿತರು ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಮತ್ತೊಮ್ಮೆ ಪ್ರಕರಣಗಳ ಸಂಖ್ಯೆ ಸಾವಿರ ಗಡಿ ದಾಟಿದೆ. ಕೊರೊನಾದ ಎರಡನೇ ಅಲೆ ಪ್ರಾರಂಭವಾದ ನಂತರ ಜಿಲ್ಲೆಯಲ್ಲಿ ಎರಡನೇ ಬಾರಿಗೆ ಒಂದೇ ದಿನ ಸಾವಿರಕ್ಕೂ ಹೆಚ್ಚು ಪ್ರಕರಣ ದೃಢಪಟ್ಟಿವೆ. ದಾವಣಗೆರೆ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ 527 ಪ್ರಕರಣ ಪತ್ತೆಯಾಗಿವೆ. ಹರಿಹರದಲ್ಲಿ 120 , ಜಗಳೂರಿನಲ್ಲಿ 45, ಚನ್ನಗಿರಿಯಲ್ಲಿ 280, ಹೊನ್ನಾಳಿಯಲ್ಲಿ 296 ಹಾಗೂ ಹೊರ ಜಿಲ್ಲೆಯ 41 ಜನರು ಒಳಗೊಂಡಂತೆ 1309 ಜನರಲ್ಲಿ ಮಹಾಮಾರಿ ಕೊರೊನಾ ಪತ್ತೆಯಾಗಿದೆ.

ಇದನ್ನೂ ಓದಿ :ಕೋವಿಡ್ ನಿಂದ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ 10 ಲಕ್ಷ ಪರಿಹಾರ : ತಮಿಳುನಾಡು ಸರ್ಕಾರ

ಕಳೆದ ವರ್ಷ ಕೊರೊನಾ ಪ್ರಾರಂಭದಿಂದ ದಾವಣಗೆರೆ ತಾಲೂಕಿನಲ್ಲಿ 21681, ಹರಿಹರದಲ್ಲಿ 5458, ಜಗಳೂರಿನಲ್ಲಿ 2077, ಚನ್ನಗಿರಿಯಲ್ಲಿ4408, ಹೊನ್ನಾಳಿಯಲ್ಲಿ4766, ಹೊರ ಜಿಲ್ಲೆಯ 1169 ಜನರು ಸೇರಿದಂತೆ ಈವರೆಗೆ ಒಟ್ಟು 39,559 ಜನರು ಸೋಂಕಿಗೆ ಒಳಗಾಗಿದ್ದಾರೆ.

Advertisement

ಕೊರೊನಾದಿಂದ ಈವರೆಗೆ ದಾವಣಗೆರೆ ತಾಲೂಕಿನಲ್ಲಿ 19158, ಹರಿಹರದಲ್ಲಿ 4656, ಜಗಳೂರಿನಲ್ಲಿ 1709, ಚನ್ನಗಿರಿಯಲ್ಲಿ3549, ಹೊನ್ನಾಳಿಯಲ್ಲಿ 3942, ಹೊರ ಜಿಲ್ಲೆಯ 1064 ಜನರು ಸೇರಿದಂತೆ 33,988 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 5233ಸಕ್ರಿಯ ಪ್ರಕರಣಗಳಿವೆ.

ಜಿಲ್ಲೆಯಲ್ಲಿ ಕೊರೊನಾದಿಂದ ಮೂವರು ಮೃತಪಟ್ಟಿದ್ದಾರೆ. ದಾವಣಗೆರೆಯ ಆಜಾದ್‌ನಗರದ ೬೮ ವರ್ಷದ ವೃದ್ಧೆ,ಎಸ್‌ಕೆಎಸ್ ನಗರದ 69 ವರ್ಷದ ವೃದ್ಧೆ, ಹಾಗೂ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ 50 ವರ್ಷದ ಮಹಿಳೆ ಮೃತಪಟ್ಟವರು. ಈವರೆಗೆ ಕೊರೊನಾದಿಂದ ಜಿಲ್ಲೆಯಲ್ಲಿ 338 ಜನರು ಸಾವನ್ನಪ್ಪಿದ್ದಂತಾಗಿದೆ.

ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ 265 ಸೋಂಕಿತರು ಸಾಮಾನ್ಯ, 699 ಸೋಂಕಿತರು ಆಕ್ಸಿಜನ್, 28 ಸೋಂಕಿತರು ಎಚ್‌ಎಫ್‌ಎನ್‌ಸಿ, 52 ಸೋಂಕಿತರು ವೆಂಟಿಲೇಟರ್ 37 ಸೋಂಕಿತರು ವೆಂಟಿಲೇಟರ್ ರಹಿತ, 2325 ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. 1119 ಸೋಂಕಿತರು ಕೋವಿಡ್ ಕೇರ್ ಸೆಂಟರ್‌ನಲ್ಲಿ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next