Advertisement

24 ಮಂದಿಗೆ ಕೋವಿಶೀಲ್ಡ್‌  ಲಸಿಕೆ

05:08 PM Jan 23, 2021 | Team Udayavani |

ಮಲೇಬೆನ್ನೂರು: ದೇವರಬೆಳಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ 24 ಆರೋಗ್ಯ ಕಾರ್ಯಕರ್ತರಿಗೆ ಕೋವಿಶೀಲ್ಡ್‌ ಲಸಿಕೆ ನೀಡಲಾಯಿತು. ಯಾವುದೇ ಅಡ್ಡ ಪರಿಣಾಮ ಆಗಿಲ್ಲ ಎಂದು ತಾಲೂಕು ವೈದ್ಯಾಧಿಕಾರಿ ಚಂದ್ರಮೋಹನ್‌ ತಿಳಿಸಿದರು.

Advertisement

ಒಬ್ಬರು ವೈದ್ಯರು, 6 ಜನ ಪ್ಯಾರಾ ಮೆಡಿಕಲ್‌ ಸಿಬ್ಬಂದಿ, 1 ಗ್ರೂಪ್‌ ಡಿ ನೌಕರ, 12 ಜನರ ಆಶಾ ಕಾರ್ಯಕರ್ತರು ಮತ್ತು 4 ಜನ ಅಂಗನವಾಡಿ ಕಾರ್ಯಕರ್ತರು ಸೇರಿದಂತೆ 24 ಜನರಿಗೆ ಲಸಿಕೆ ನೀಡಲಾಗಿದ್ದು, ಅವರೆಲ್ಲರೂ ಆರೋಗ್ಯದಿಂದ ಇದ್ದಾರೆ. 3 ಜನರು ವಿವಿಧ ಕಾರಣಗಳಿಂದ ಗೈರಾಗಿದ್ದಾರೆ ಎಂದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ದರ್ಶನ್‌ ಸ್ವತಃ ಕೋವಿಶೀಲ್ಡ್‌ ಲಸಿಕೆ ಪಡೆದು ಇತರರಿಗೆ ಸ್ಫೂರ್ತಿಯಾದರು. ಜಿಲ್ಲಾ ಮಲೇರಿಯಾ ಅಧಿಕಾರಿ ಡಾ| ನಟರಾಜ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅ ಧಿಕಾರಿ ಡಾ| ನಾಗರಾಜ್‌ ಭೇಟಿ ನೀಡಿ ಪರಿಶೀಲಿಸಿದರು.

ಹಿರಿಯ ಆರೋಗ್ಯ ಸಹಾಯಕ ಎಂ. ಉಮ್ಮಣ್ಣ, ಕಿರಿಯ ಆರೋಗ್ಯ ಸಹಾಯಕ ದಾದಾಪೀರ್‌, ಬಿ. ಆದರ್ಶ, ಎನ್‌. ಟಿ. ಪರುಶುರಾಮಪ್ಪ, ರೇಖಾ, ಸಭೀತಮ್ಮ, ಭಾಗ್ಯಮ್ಮ, ಲಕ್ಷ್ಮೀದೇವಿ, ಪೂಜಾದೀಪಾ, ಆರ್‌.ಎಸ್‌. ಜ್ಯೋತಿ. ಅರುಣ್‌ ಕುಮಾರ್‌, ಅನಸೂಯಮ್ಮ, ರಾಮಾನಾಯ್ಕ, ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next