Advertisement

ಇಂದೋರ್‌ನಲ್ಲಿ ಮತ್ತೊಬ್ಬ ವೈದ್ಯ ಕೋವಿಡ್ ಸೋಂಕಿಗೆ ಬಲಿ

09:27 AM Apr 13, 2020 | Hari Prasad |

ಇಂದೋರ್: ತಮ್ಮ ಜೀವವನ್ನೇ ಪಣಕ್ಕಿಟ್ಟು ಕೋವಿಡ್ ಸೋಂಕಿತರ ಪ್ರಾಣ ರಕ್ಷಿಸುವಲ್ಲಿ ನಿರತರಾಗಿದ್ದ ಮತ್ತೂಬ್ಬ ವೈದ್ಯನನ್ನು ದೇಶ ಕಳೆದುಕೊಂಡಿದೆ. ಮಧ್ಯಪ್ರದೇಶದ ಕೋವಿಡ್ ಹಾಟ್‌ ಸ್ಪಾಟ್‌ ಆಗಿರುವ ಇಂದೋರ್ ನಲ್ಲಿ 65 ವರ್ಷದ ವೈದ್ಯ ಓಂ ಪ್ರಕಾಶ್‌ ಚೌಹಾಣ್‌ ಅವರು ಅಸುನೀಗಿದ್ದಾರೆ.

Advertisement

ಆಯುಷ್‌ (ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ) ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಚೌಹಾಣ್‌ ಅವರಿಗೆ ಇತ್ತೀಚೆಗಷ್ಟೇ ಕೋವಿಡ್ ಸೋಂಕು ದೃಢಪಟ್ಟಿತ್ತು.

ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ವಿದೇಶಕ್ಕೆಲ್ಲೂ ಪ್ರಯಾಣಿಸಿ ಬಂದಿಲ್ಲ. ಆದರೆ, ಸೋಂಕಿತರಿಗೆ ಚಿಕಿತ್ಸೆ ನೀಡಿದ ಕಾರಣ, ಅವರಿಗೂ ಸೋಂಕು ತಗುಲಿರಬಹುದು ಎಂದು ಆರೋಗ್ಯಾಧಿಕಾರಿ ಪ್ರವೀಣ್‌ ಜಾಡಿಯಾ ಹೇಳಿದ್ದಾರೆ.

ಗುರುವಾರವಷ್ಟೇ ಇಂದೋರ್‌ನಲ್ಲಿ 62 ವರ್ಷದ ವೈದ್ಯ ಶತ್ರುಘ್ನ ಪಂಜುವಾನಿ ನಿಧನ ಹೊಂದಿದ್ದರು. ಅಲ್ಲಿ ಒಂದೇ ದಿನ ನಾಲ್ವರು ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ 27ಕ್ಕೇರಿದೆ. ಮುಂಬಯಿನ ಬಳಿಕ ಅತಿ ಹೆಚ್ಚು ಸಾವು ಕಂಡ ನಗರ ಎಂಬ ಕುಖ್ಯಾತಿಗೂ ಅದು ಪಾತ್ರವಾಗಿದೆ. ಇದರಿಂದಾಗಿ ಕೋವಿಡ್ ನಿಂದಾಗಿ ಸಾವಿನ ಸಂಖ್ಯೆ ನಗರದಲ್ಲಿ ಶೇ.10 ರಿಂದ ಶೇ.12ಕ್ಕೆ ಹೆಚ್ಚಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next