Advertisement

ರಾಮನವಮಿಗೂ ಕೋವಿಡ್ 19 ಭೀತಿ

11:03 AM Apr 03, 2020 | Suhan S |

ಕೋಲಾರ: ಶ್ರೀರಾಮನವಮಿ ಆಚರಣೆಗೂ ಕೋವಿಡ್ 19 ಭೀತಿ ತಟ್ಟಿದ್ದು, ಸರ್ಕಾರದ ಲಾಕ್‌ ಡೌನ್‌ ನಿರ್ದೇಶನ ಪಾಲಿಸಿದ ನಾಗರಿಕರು ಸಾಮೂಹಿಕವಾಗಿ ರಾಮನವಮಿ ಎಲ್ಲೂ ಆಚರಿಸಲಿಲ್ಲ,

Advertisement

ನಗರದ ಕೋಗಿಲಳ್ಳಿ ಸಮೀಪ ಯುವಕರುಸಾಮಾಜಿಕ ಅಂತರ ಕಾಯ್ದುಕೊಂಡು ಹನುಮನಿಗೆ ಕೇವಲ ಪೂಜೆ ಸಲ್ಲಿಸಿ ತಮ್ಮ ಭಕ್ತಿ ಪ್ರದರ್ಶಿಸಿದರು. ಹನುಮ ದೇಗುಲಗಳ ತವರು ಎಂದೇ ಖ್ಯಾತವಾಗಿರುವ ಕೋಲಾರ ಜಿಲ್ಲೆಯಲ್ಲಿ ರಾಮನವಮಿಗೆ ಹೆಚ್ಚಿನ ಆದ್ಯತೆ ಇದ್ದು, ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆಯನ್ನು ಮಾತ್ರ ಮರೆಯುತ್ತಿರಲಿಲ್ಲ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಅನೇಕ ಯುವಕರು, ವ್ಯಾಪಾರಿಗಳ ಸಂಘಟನೆಗಳುನಗರದ ರಸ್ತೆಗಳಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸುವ ಕಾರ್ಯವನ್ನು ನಡೆಸಿಕೊಂಡು ಬಂದಿದ್ದರು.

ಇದೀಗ ಸರ್ಕಾರ ಸಾಮೂಹಿಕ ಪ್ರಾರ್ಥನೆಗೂ ನಿಷೇಧ ಹೇರಿದ್ದು, ದೇವಾಲಯಗಳು ಬಂದ್‌ ಆಗಿರುವುದರಿಂದ ಶ್ರೀರಾಮನವಮಿ ಮನೆಗಳಿಗೆ ಸೀಮಿತವಾಯಿತು. ಆದರೂ ಕೆಲವು ಕಡೆಗಳಲ್ಲಿ ಯುವಕರು ಸಾಮಾಜಿಕ ಅಂತರ ಕಾಯ್ದುಕೊಂಡು ಪೂಜೆ ಮಾತ್ರ ಸಲ್ಲಿಸಿ, ಪಾನಕ, ಮಜ್ಜಿಗೆ, ಕೋಸಂಬರಿ ಸಾಂಕೇತಿಕವಾಗಿ ವಿತರಣೆ ಮಾಡಿ ಸರ್ಕಾರದ ಆದೇಶವನ್ನು ಗೌರವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next