Advertisement

ಗ್ರಾಮಾಂತರ ಜಿಲ್ಲೆಗೆ ಕೋವಿಡ್‌ 19 ಆಘಾತ!

06:01 AM May 23, 2020 | Lakshmi GovindaRaj |

ದೊಡ್ಡಬಳ್ಳಾಪುರ/ನೆಲಮಂಗಲ: ಹಸಿರು ವಲಯದಲ್ಲಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಶುಕ್ರವಾರ ಕೋವಿಡ್‌ 19ಘಾತವಾಗಿದ್ದು, 4 ಪ್ರಕರಣಗಳು ಪತ್ತೆಯಾಗಿವೆ. ದೊಡ್ಡಬಳ್ಳಾಪುರದಲ್ಲಿ 3 ಹಾಗೂ ನೆಲಮಂಗಲದಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಿದ್ದರೂ, ಜಿಲ್ಲೆ ಪ್ರಕರಣಗಳಿಲ್ಲದೇ ಹಸಿರುವ ವಲಯದಲ್ಲಿತ್ತು.

Advertisement

ದೊಡ್ಡಬಳ್ಳಾಪುರದ ಮೂವರು ಸೋಂಕಿತರು ಮುಂಬೈನಿಂದ ಬಂದಿದ್ದವರಾಗಿದ್ದರೆ, ನೆಲಮಂಗಲ  ತಾಲೂಕಿನ ತಾಲೂಕಿನ ವೀರಸಾಗರದ 55 ವರ್ಷದ ರೈತ ಮಹಿಳೆ  ಯಲ್ಲಿ ಸೋಂಕು ಪತ್ತೆಯಾಗಿದೆ. ತಾಲೂಕಿನ ತಿಪ್ಪೂರು ಗ್ರಾಪಂ ವ್ಯಾಪ್ತಿಯ ಹೊಸಹಳ್ಳಿ ತಾಂಡ್ಯದ 6 ಮಂದಿ ಕಾರ್ಮಿಕರು ಮಹಾರಾಷ್ಟ್ರದ ಮುಂಬೈನಿಂದ ಬಂದಿದ್ದು, ಅವರಲ್ಲಿ 3 ಮಂದಿಗೆ ಕೋವಿಡ್‌ 19 ಸೋಂಕು ದೃಢಪಟ್ಟಿದೆ.

ಸೋಂಕು ದೃಢಪಟ್ಟಿರುವ 3 ಜನರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಹಿನ್ನಲೆ: ತಾಲೂಕಿನ ಹೊಸಹಳ್ಳಿ ತಾಂಡ ಗ್ರಾಮದವರು  ಕೆಲಸದ ನಿಮಿತ್ತ ಮುಂಬೈ ಯಲ್ಲಿ ಐದು ವರ್ಷಗಳಿಂದ ನೆಲೆಸಿದ್ದರು. ಮುಂಬೈ ನಗರದಲ್ಲಿ ಕೂಲಿ ಕೆಲಸ ಮಾಡು  ತ್ತಿದ್ದ 12 ಮಂದಿ ಬಾಡಿಗೆ ವಾಹನದಲ್ಲಿ ಮೇ 17ರಂದು ಬಾಗೇಪಲ್ಲಿಗೆ ತೆರಳಿ ಅಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ  ಪರೀಕ್ಷೆಗೊಳಪಟ್ಟಿದ್ದರು.

ಮೂವರು ಬಾಗೇಪಲ್ಲಿ ನಿವಾಸಿಗಳು ಅಲ್ಲಿಯೇ ಉಳಿದು, ಉಳಿದವರು ಅವರ ತಾಲೂಕುಗಳಿಗೆ ತೆರಳುವಂತೆ ಸೂಚಿಸಿದಾಗ ಇವರಲ್ಲಿ ಮೂವರು ಗೌರಿಬಿದನೂರಿಗೆ ತೆರಳಿದ್ದಾರೆ. ಇನ್ನುಳಿದ ಆರು ಮಂದಿ  ದೊಡ್ಡಬಳ್ಳಾಪುರಕ್ಕೆ ಬಂದು ಇಲ್ಲಿನ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಿಕೊಂಡು ಐಸೋಲೇಷನ್‌ ನಲ್ಲಿದ್ದರು. ಅವರಲ್ಲಿ ಮೂವರು ಪುರುಷರು ಹಾಗೂ ಮೂವರು ಮಹಿಳೆಯರಾಗಿದ್ದು, ಈ 6 ಮಂದಿಯನ್ನು ಕೋವಿಡ್‌-19 ಪರೀಕ್ಷೆಗೊಳಪಡಿಸಿದಾಗ ಮೂವರಲ್ಲಿ ಕೋವಿಡ್‌ -19 ಪಾಸಿಟಿವ್‌ ವರದಿಬಂದಿದೆ.

ಮೂವರು ಸೋಂಕಿತರು ಮಹಿಳೆಯರಾಗಿ ದ್ದಾರೆ. ಏ.13ರಂದು ತಾಲೂಕಿನ ಮಧುರೆ ಹೋಬಳಿಯ ಕೋಡಿಪಾಳ್ಯದಲ್ಲಿ ರೈಲ್ವೆ ಉದ್ಯೋಗಿಯೊಬ್ಬರಿಗೆ  ಕೋವಿಡ್‌-19 ದೃಢಪಟ್ಟು ಇಡೀ ಗ್ರಾಮವನ್ನು ಸೀಲ್‌ಡೌನ್‌ ಮಾಡಲಾಗಿತ್ತು. ಸೋಂಕಿತ ವ್ಯಕ್ತಿ ಗುಣಮುಖನಾದ ನಂತರ ಈವರೆಗೂ ತಾಲೂಕಿನಲ್ಲಿ ಕೋವಿಡ್‌ 19 ಸೋಂಕಿನ ಪ್ರಕರಣಗಳು ವರದಿಯಾಗಿರಲಿಲ್ಲ.

Advertisement

ನೆಲಮಂಗಲಕ್ಕೆ ಕಾಲಿಟ್ಟ ಕೋವಿಡ್‌ 19: ತಾಲೂಕಿನ ವೀರಸಾಗರದ 55 ವರ್ಷದ ರೈತ ಮಹಿಳೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಪರೀಕ್ಷೆ ನಂತರ (ಪಿ.1686) ಕೋವಿಡ್‌ 19 ಪಾಸಿಟಿವ್‌ ಎಂದು ಗೊತ್ತಾಗಿದೆ. ಸೋಂಕಿತೆ 20  ದಿನಗಳ ಹಿಂದೆ ಕೊರಟಗೆರೆ ತಾಲೂಕಿನ ಬೈಚನಹಳ್ಳಿ ಗ್ರಾಮದ ಅಣ್ಣನ ಮನೆಗೆ ಹೋಗಿದ್ದರು. ತುಮಕೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಪಾಸಿಟಿವ್‌ ದೃಢಪಟ್ಟಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕ್ವಾರಂಟೈನ್‌: ತಾಲೂಕಿನಲ್ಲಿ ಸೋಂಕಿತ ಮಹಿಳೆ ಸಂಪರ್ಕದಲ್ಲಿದ್ದ 11 ಮಂದಿಯನ್ನು ಕ್ವಾರಂಟೈನ್‌ನಲ್ಲಿರಿಸಬೇಕಾಗಿದ್ದು, ಸೋಂಕಿತ 1207ರ ಸಂಪರ್ಕದ ಅಲಂಕಾರ್‌ ಡಾಬದ 9 ಮಂದಿ, ಸೋಂಕಿತ 1364ರ ಸಂಪರ್ಕದ ಹುಲ್ಲರಿವೆ  ಗ್ರಾಮದ 7 ಜನರು ಸೇರಿದಂತೆ ತಾಲೂಕಿನಲ್ಲಿ 82 ಜನರನ್ನು ಹೋಮ್‌ ಕ್ವಾರಂಟೈನ್‌ ಮಾಡಲಾಗಿದೆ.

ಮಹಿಳೆಗೆ ಪಾಸಿಟಿವ್‌ ಪತ್ತೆಯಾದ ಬೆನ್ನಲ್ಲೆ ವೀರಸಾಗರಕ್ಕೆ ಭೇಟಿನೀಡಿದ ತಾಲೂಕು ಆರೋಗ್ಯಾಧಿಕಾರಿಗಳ ತಂಡ ಪ್ರಾಥಮಿಕ ಸಂಪರ್ಕದ  ಮಾಹಿತಿ ಪಡೆದು ಮನೆಗಳ ಮೇಲೆ ಎಚ್ಚರಿಕೆ ಸಂದೇಶದ ಜತೆ ಕಡ್ಡಾಯ ಕ್ವಾರಂಟೈನ್‌ನಲ್ಲಿ ಇರುವಂತೆ ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next