Advertisement

ಕೋವಿಡ್ 19 ನೆಪದಲ್ಲಿ ಪರಿಶೀಲನೆ: 62 ಸಾವಿರ ರೂ.ದಂಡ ವಸೂಲಿ

02:50 PM Mar 25, 2020 | Suhan S |

ಕೆಜಿಎಫ್: ಕೋವಿಡ್ 19 ವೈರಸ್‌ ಹಿನ್ನೆಲೆಯಲ್ಲಿ ಸ್ವಯಂ ನಿರ್ಬಂಧ ಹೇರಿಕೊಂಡು ಮನೆಯಲ್ಲಿರಬೇಕಾದ ಬೈಕ್‌ ಸವಾರರು ಬೀದಿಗೆ ಬಂದ ಕಾರಣ, ಅವರಿಗೆ ದಾಖಲೆ ಪರಿಶೀಲಿಸಿ ಪೊಲೀಸರು ಬೃಹತ್‌ ಮಟ್ಟದ ದಂಡ ವಸೂಲಿ ಮಾಡಿದರು.

Advertisement

ನಗರದ ರಾಬರ್ಟಸನ್‌ಪೇಟೆ ಸೂರಜ್‌ ಮಲ್‌ ವೃತ್ತದಲ್ಲಿ ಬೈಕ್‌ ಸವಾರರನ್ನು ಅಡ್ಡಗಟ್ಟುತ್ತಿದ್ದ ಪೊಲೀಸರು, ಅವರಿಂದ ದಾಖಲೆಗಳನ್ನು ಕೇಳಿದರು. ದಾಖಲೆ ಇಲ್ಲದ ಬೈಕ್‌ ಸವಾರರಿಗೆ ಸ್ಥಳದಲ್ಲಿಯೇ ದಂಡ ವಿಧಿಸಿದರು. ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಮನೆ ಬಿಟ್ಟು ಹೊರಬರಬಾರದು ಎಂದು ತಿಳಿವಳಿಕೆ ನೀಡಿದರು.

ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 124 ಪ್ರಕರಣಗಳಿಗೆ ಸಂಬಂಧಿಸಿದಂತೆ 62 ಸಾವಿರ ರೂ. ದಂಡ ವಸೂಲಿ ಮಾಡಲಾಯಿತು. ಸರ್ಕಲ್‌ ಇನ್ಸ್‌ಪೆಕ್ಟರ್‌ ಸೂರ್ಯಪ್ರಕಾಶ್‌ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next